ಮನುಷ್ಯತ್ವವನ್ನೇ ಮರೆತ ಜನ- 20 ಕ್ಕೂ ಹೆಚ್ಚು ಮಂಗಗಳ ಮಾರಣಹೋಮ

Public TV
1 Min Read

ಉಡುಪಿ: 20 ಕ್ಕೂ ಹೆಚ್ಚು ಮಂಗಗಳಿಗೆ ವಿಷಪ್ರಾಶನ ಮಾಡಿ ಹತ್ಯೆ ಮಾಡಿರುವ ಹೃದಯವಿದ್ರವಾಕ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಸೋಮೇಶ್ವರ ಬಳಿ ನಡೆದಿದೆ.

ಬೇರೆ ಪ್ರದೇಶದಲ್ಲಿ ಮಂಗಗಳಿಗೆ ವಿಷಪ್ರಾಶನ ಮಾಡಿರುವ ದುಷ್ಕರ್ಮಿಗಳು, ನಾಲ್ಕು ಮೂಟೆಗಳಲ್ಲಿ ಮಂಗಗಳನ್ನು ತಂದು ಆಗುಂಬೆ ಘಾಟ್ ಎರಡನೇ ಸುತ್ತಿನಲ್ಲಿ ಎಸೆದು ಹೋಗಿದ್ದಾರೆ.

ಮೂಕಪ್ರಾಣಿಗಳ ನರಳಾಟ ಕಂಡು ಮರುಗಿದ ಪ್ರವಾಸಿಗರು ತಕ್ಷಣ ಅವುಗಳಿಗೆ ನೀರು ಕುಡಿಸಿ ಆರೈಕೆ ಮಾಡಿದರಾದ್ರೂ, ಸ್ವಲ್ಪ ಸಮಯದಲ್ಲಿಯೇ ಮಂಗಗಳು ನರಳಿ ನರಳಿ ಸಾವನ್ನಪ್ಪಿವೆ.

ಮಂಗಗಳು ತೋಟಗಳಿಗೆ ನುಗ್ಗಿ ಬೆಳೆಹಾನಿ ಮಾಡುತ್ತವೆ ಎಂಬ ಕಾರಣದಿಂದ ತೋಟದ ಮಾಲೀಕರು ಮಂಗಗಳಿಗೆ ವಿಷಪ್ರಾಶನ ಮಾಡಿ ಇಲ್ಲಿ ತಂದು ಎಸೆದಿರಬಹುದು ಎಂಬ ಶಂಕೆ ಸ್ಥಳೀಯರಲ್ಲಿ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *