ತುಂಬಿ ಹರಿಯುತ್ತಿರುವ ಭೀಮಾ ನದಿಗೆ ಹಾರಿ ಯುವಕರಿಂದ ಹುಚ್ಚಾಟ

Public TV
1 Min Read

ವಿಜಯಪುರ: ತುಂಬಿ ಹರಿಯುತ್ತಿರುವ ಭೀಮಾ ನದಿಯಲ್ಲಿ ಇಬ್ಬರು ಯುವಕರು ಹುಚ್ಚು ಸಾಹಸ ಮಾಡಿದ್ದಾರೆ. ರೈಲ್ವೇ ಸೇತುವೆ ಮೇಲಿನಿಂದ ನದಿಗೆ ಹಾರಿ ಈಜಾಡಿ ದುಸ್ಸಾಹಸ ಮೆರೆದಿದ್ದಾರೆ.

ಇಂಡಿ ತಾಲೂಕಿನ ಪಡನೂರು ಗ್ರಾಮದ ಬಳಿಯ ರೈಲ್ವೇ ಬ್ರಿಡ್ಜ್ ಬಳಿ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ತಡವಾಳ ಗ್ರಾಮದ ನಿವಾಸಿಗಳಾದ ಪ್ರತಾಪ್ ಬೂವಿ(31) ಹಾಗೂ ಸಲ್ಮಾನ್ ಶೇಖ್(21) ನದಿಯಲ್ಲಿ ಹುಚ್ಚಾಟ ಮೆರೆದಿದ್ದಾರೆ. ಅಪಾಯದ ಮಟ್ಟದಲ್ಲಿ ಭೀಮಾನದಿ ಹರಿಯುತ್ತಿದೆ, ಆದರೂ ಕೂಡ ಮೂವತ್ತು ಅಡಿ ಎತ್ತರದ ರೇಲ್ವೇ ಬ್ರಿಡ್ಜ್ ಮೇಲಿಂದ ಯುವಕರು ನದಿಗೆ ಹಾರಿ ಈಜಿದ್ದಾರೆ.

ಭೋರ್ಗರೆದು ಹರಿಯುತ್ತಿದ್ದ ನದಿಯಲ್ಲಿ ಈಜಿಕೊಂಡು ದಡ ಸೇರಿದ್ದಾರೆ. ಯುವಕರು ನದಿಗೆ ಹಾರಿ ಈಜಾಡುತ್ತಿರುವ ಅಪಾಯಕಾರಿ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *