ಜೈಲಿನ ಕಿಟಿಕಿ ಮುರಿದು ವಿಚಾರಣಾಧೀನ ಕೈದಿಗಳು ಪರಾರಿ!

Public TV
0 Min Read

ಬೆಳಗಾವಿ: ಜೈಲಿನ ಕಿಟಕಿ ಮುರಿದು ಇಬ್ಬರು ವಿಚಾರಣೆ ಕೈದಿಗಳು ಪರಾರಿಯಾಗಿರೋ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿರುವ ಸಬ್ ಜೈಲಿನಲ್ಲಿ ನಡೆದಿದೆ.

ಬೈಕ್ ಕಳ್ಳತನ ಆರೋಪದಡಿ ಸಬ್ ಜೈಲನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಸುರೇಶ ಶರಣಪ್ಪ ಚಲವಾದಿ(36) ಹಾಗೂ ಮನೆ ಕಳ್ಳತನ ಪ್ರಕರಣದಲ್ಲಿವಿಚಾರಣೆಗಾಗಿ ಕಳೆದ ಮೂರು ತಿಂಗಳಿಂದ ರಾಮದುರ್ಗ ಸಬ್ ಜೈಲ್‍ನಲ್ಲಿದ್ದ ವಿಜಾಪುರ ಜಿಲ್ಲೆ ಹೊನ್ನಳ್ಳಿ ಮೂಲದ ಕೈದಿ ಸಂತೋಷ ಶಿವಣ್ಣ ನಂದಿಹಾಳ್ (36) ಪರಾರಿಯಾದ ಕೈದಿಗಳು.

ಸಬ್ ಜೈಲದಿಂದ ಪರಾರಿಯಾದ ಕೈದಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *