ಬೊಲೆರೋ ಡಿಕ್ಕಿ- ಕೆಟ್ಟು ನಿಂತ ವಾಹನದಲ್ಲಿ ಮಲಗಿದ್ದವರು ಚಿರನಿದ್ರೆಗೆ ಜಾರಿದ್ರು

Public TV
1 Min Read

ರಾಯಚೂರು: ಎರಡು ಬೊಲೆರೋ ಪಿಕ್ ಅಪ್ ವಾಹನಗಳ ಮಧ್ಯೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಗ್ರಾಮದ ಬಳಿ ನಡೆದಿದೆ.

ಲಿಂಗಸುಗೂರಿನ ಎರೆಜಂತಿ ಗ್ರಾಮದ ಮಲ್ಲಪ್ಪ(47) ಮತ್ತು ಲಿಂಗಪ್ಪ(47) ಮೃತ ದುರ್ದೈವಿಗಳು. ಯಾದಗಿರಿಯ ಶಹಪುರದಿಂದ ಹೊರಟಿದ್ದ ವಾಹನ ಸಿಂಧನೂರಿನ ಎಲೆಕೂಡ್ಲಿಗಿ ಗ್ರಾಮದ ಬಳಿ ಕೆಟ್ಟು ನಿಂತಿತ್ತು. ವಾಹನ ರಿಪೇರಿಯಾಗದ ಹಿನ್ನೆಲೆಯಲ್ಲಿ ಈ ಇಬ್ಬರು ವಾಹನದಲ್ಲೇ ಮಲಗಿದ್ದರು. ಲಿಂಗಸೂಗುರು ಕಡೆಯಿಂದ ಬಂದ ಇನ್ನೊಂದು ಬೊಲೆರೋ ವಾಹನ ನಿಂತ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಕೆಟ್ಟು ನಿಂತಿದ್ದ ವಾಹನದಲ್ಲಿ ಮಲಗಿದ್ದವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಮತ್ತೊಂದು ವಾಹನದಲ್ಲಿದ್ದ ಇಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಈ ಸಂಬಂಧ ತುರವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *