ಕಾಲು ಜಾರಿ ಕೆಂಡದ ರಾಶಿಗೆ ಬಿದ್ದ ಭಕ್ತ- ರಕ್ಷಿಸಲು ಹೋದ ಸಹಭಕ್ತನಿಗೂ ಗಂಭೀರ ಗಾಯ

Public TV
1 Min Read

ಕೊಪ್ಪಳ: ಕೌಡೇಪೀರ ಕೆಂಡದಲ್ಲಿ ಬಿದ್ದು ಇಬ್ಬರಿಗೆ ಸುಟ್ಟ ಗಾಯವಾಗಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ಇಂದು ನಸುಕಿನ ಜಾವ ಈ ಘಟನೆ ಸಂಭವಿಸಿದೆ. ಚಿಕ್ಕ ಬೆಣಕಲ್ ಗ್ರಾಮದ ಖಾದರ್ ಸಾಬ್ ಹಾಗೂ ಜಮಪೂರ ಗ್ರಾಮದ ಖಾಜಾಸಾಬ್ ಗಾಯಗೊಂಡವರು.

ಮೊಹರಂ ನಂತರ ಅದೇ ಮಾದರಿಯಲ್ಲಿ ನಡೆಯುವ ಕೌಡೇಪೀರ ಆಚರಣೆ ವೇಳೆ ಅಗ್ನಿ ಹಾಯಲಾಗುತ್ತೆ. ಈ ವೇಳೆ ಅಗ್ನಿ ಹಾಯುವಾಗ ಕಾಲು ತೊಡರಾಗಿ ಕೆಂಡದಲ್ಲಿ ಮೊದಲು ಖಾದರ್ ಸಾಬ್ ಬಿದ್ದಿದ್ದಾರೆ. ಅವರನ್ನು ರಕ್ಷಣೆ ಮಾಡಲು ಹೋದ ಖಾಜಾಸಾಬ್ ಅವರಿಗೂ ಸುಟ್ಟು ಗಾಯವಾಗಿವೆ.

ಸದ್ಯ ಖಾಜಾಸಾಬ್ ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆಯಿಂದಾಗಿ ಗಂಭೀರ ಸುಟ್ಟು ಗಾಯವಾಗಿದ್ರಿಂದ ಖಾದರ್ ಸಾಬ್‍ರನ್ನು ಹೆಚ್ಚಿನ ಚಿಕಿತ್ಸೆಗೆಂದು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *