ಮೊಹರಂಗಾಗಿ ಉಚಿತ ರೇಷನ್ ಕೂಪನ್ ವಿತರಣೆ- ನೂಕುಗ್ಗಲಾಗಿ ಇಬ್ಬರ ಸಾವು

Public TV
1 Min Read

ಚಿಕ್ಕಬಳ್ಳಾಪುರ: ನಗರದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಉಚಿತ ರೇಷನ್ ಕೂಪನ್ ವಿತರಣೆ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಜನರ ಮಧ್ಯೆ ನೂಕುನುಗ್ಗಲು ಉಂಟಾಗಿ ಇಬ್ಬರು ಸಾವನ್ನಪಿರುವ ಘಟನೆ ಯಲಹಂಕ ಬಳಿ ನಡೆದಿದೆ.

ಉಚಿತ ರೇಷನ್ ಕೂಪನ್ ಪಡೆಯಲು ಮುಂದಾಗಿದ್ದ ರೆಹಮತ್(70), ಅನ್ವರ್(60) ಸಾವನ್ನಪ್ಪಿದ ದುದೈವಿಗಳು. ಯಲಹಂಕ ಬಳಿಯ ಮಿಟ್ಟಗಾನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ.

ಶಿವಾಜಿನಗರದ ಆಸಿಫ್ ಎಂಬವರು ಮುಸ್ಮಿಮರಿಗೆ ಉಚಿತ ಕೂಪನ್ ವಿತರಣೆ ಮಾಡುತ್ತಿದ್ದರು. ಬೆಳ್ಳಗೆಯಿಂದಲೇ ಕೂಪನ್‍ಗಾಗಿ ಸಾವಿರಾರು ಮಂದಿ ಸಾಲುಗಟ್ಟಿ ನಿಂತಿದ್ದರು. ಉಚಿತ ಕೂಪನ್ ವಿತರಣೆ ಕುರಿತು ಸಾಮಾಜಿಕ ಜಾಲತಾಣ ವಾಟ್ಸಾಪ್‍ನಲ್ಲಿ ಮಾಹಿತಿ ಪ್ರಚಾರ ಮಾಡಲಾಗಿತ್ತು.

ಪ್ರಸ್ತುತ ಬಾಗಲೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆಸಿಫ್‍ರನ್ನು ವಶಕ್ಕೆ ಪಡೆದಿದ್ದಾರೆ. ಉಚಿತ ಕೂಪನ್ ಪಡೆಯಲು ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಜನರು ಆಗಮಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *