ಮಗಳು ಆಗದ್ದಕ್ಕೆ ಕೂಲಿ ಮಾಡೋ ದಂಪತಿಯ ಮಗಳನ್ನು ಕಿಡ್ನಾಪ್‍ಗೈದ್ರು!

Public TV
1 Min Read

– ಸಂಬಂಧಿಕರಿಗೆ ಸುಳ್ಳು ಹೇಳಿದ್ದ ದಂಪತಿ
– ಕಾರ್ಯಕ್ರಮಕ್ಕೆ ಬಾಲಕಿಯನ್ನು ಕದ್ದವರು ಅರೆಸ್ಟ್

ಬೆಂಗಳೂರು: ಕಾರ್ಯಕ್ರಮಕ್ಕಾಗಿ ಹಗಡೆನಗರದಲ್ಲಿ ಕೂಲಿ ಮಾಡುವ ದಂಪತಿಯ ಮಗುವನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಾರತ್‍ಹಳ್ಳಿ ರಮೇಶ್ ಹಾಗೂ ವರ್ತೂರಿನ ಮಂಜುನಾಥ್ ಬಾಲಕಿಯನ್ನು ಕಿಡ್ನಾಪ್ ಮಾಡಿದ ಬಂಧಿತ ಆರೋಪಿಗಳು. ಆರೋಪಿ ರಮೇಶ್ ದಂಪತಿಗೆ ಮಕ್ಕಳಿರಲಿಲ್ಲ. ಆದರೆ ತನ್ನ ಸಂಬಂಧಿಕರಿಗೆ ಹೆಣ್ಣು ಮಗು ಇದೆ ಎಂದು ಹೇಳಿ ನಂಬಿಸಿದ್ದ.

ಇತ್ತೀಚೆಗೆ ಕೊಪ್ಪಳದಲ್ಲಿ ರಮೇಶ್ ಸಂಬಂಧಿಕರ ಮದುವೆ ಇತ್ತು. ಮದುವೆ ಹೋಗಬೇಕಾದರೆ ಹೆಣ್ಣು ಮಗುವನ್ನು ಕರೆದೊಯ್ಯುವ ಅನಿವಾರ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಲು ರಮೇಶ್ ಸ್ಕೆಚ್ ಹಾಕಿದ್ದ. ಪ್ಲಾನ್ ಮಾಡಿದಂತೆ ಆರೋಪಿ ರಮೇಶ್ ಹಾಗೂ ಮಂಜುನಾಥ್ ಏಪ್ರಿಲ್ 10ರಂದು ಅಂಗಡಿಗೆ ಬಂದಿದ್ದ ಬಾಲಕಿನ್ನು ಪುಸಲಾಯಿಸಿ ಬೈಕಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದರು.

ಸಿಕ್ಕಿಬಿದ್ದಿದ್ದು ಹೇಗೆ?
ಕೂಲಿ ಕಾರ್ಮಿಕ ಶರಣಪ್ಪ ಪುತ್ರಿ ಏಪ್ರಿಲ್ 10ರಂದು ತಾಯಿಂದ 2 ರೂ. ಪಡೆದು ಎಸ್‍ಆರ್‍ಕೆ ನಗದರಲ್ಲಿನ ಅಂಗಡಿಗೆ ತಿಂಡಿ ತರಲು ಹೋಗಿದ್ದಳು. ಸಂಜೆಯಾದರೂ ಪುತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಬಾಲಕಿ ಚಲಿಸಿದ ರಸ್ತೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಇಬ್ಬರು ವ್ಯಕ್ತಿಗಳು ಬೈಕಿನಲ್ಲಿ ಕುಳ್ಳಿರಿಸಿ ಆಕೆಯನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಬೈಕ್ ನಂಬರ್ ಪ್ಲೇಟ್ ಆಧಾರದ ಮೆರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *