2 ವರ್ಷಗಳ ಹಿಂದೆ ಮಾರಿದ್ದ ಎತ್ತು, ವಧಾಲಯದಲ್ಲಿ ನೋಡಿದ ರೈತ

Public TV
1 Min Read

– ವಾಪಸ್ ತಂದು ಎತ್ತಿನ ಬರ್ತ್ ಡೇ ಆಚರಿಸಿ ಸಂಭ್ರಮ

ಧಾರವಾಡ: ಎತ್ತುಗಳು ಅಂದ್ರೆ ರೈತರ ಕೃಷಿಯ ಮೂಲ ಆಧಾರ. ಆದರೆ ಬರಗಾಲದಂತಹ ಪರಿಸ್ಥಿತಿಗಳು ಬಂದಾಗ ಅನೇಕ ರೈತರು ತಮ್ಮ ಎತ್ತುಗಳನ್ನು ಸಾಕಲು ಆಗದೇ ಬಂದಷ್ಟು ಬೆಲೆಗೆ ಮಾರಾಟ ಮಾಡಿ ಬಿಡ್ತಾರೆ. ಇಲ್ಲೊಬ್ಬ ರೈತ ಹಾಗೆಯೇ ಎರಡು ವರ್ಷಗಳ ಹಿಂದೆ ತನ್ನ ಎತ್ತನ್ನ ಮಾರಿದ್ದರು. ಅದಾದ ಕೆಲವೇ ದಿನಕ್ಕೆ ಆ ಎತ್ತು ವಧಾಲಯದ ಬಳಿ ಸಿಕ್ಕಿದೆ. ಇನ್ನೇನು ಬಲಿಯಾಗುತ್ತಿದ್ದ ಎತ್ತನ್ನು ರಕ್ಷಿಸಿದ ರೈತ, ಅದಕ್ಕೆ ದುಪ್ಪಟ್ಟು ಬೆಲೆ ನೀಡಿ ಮನೆಗೆ ಕರೆ ತಂದಿದ್ದಾರೆ. ಎತ್ತನ್ನು ಮರಳಿ ತಂದ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿ ಸಂಭ್ರಮಿಸಿದ್ದಾರೆ.

ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದ ನಾಗಪ್ಪ ಓಮಗಣ್ಣವರ್ ಎತ್ತು ವಾಪಸ್ ತಂದ ರೈತ. ಎರಡು ವರ್ಷದ ಹಿಂದೆ ಭೀಕರ ಬರಗಾಲ ಬಂದಾಗ, ಎತ್ತನ್ನು ಸಾಕಲು ಕಷ್ಟವಾಗಿತ್ತು. ಎತ್ತನ್ನು ಪಕ್ಕದ ಊರಿನ ರೈತನಿಗೆ ಮಾರಿದ್ದರು. ಆದರೆ ಮಾರಾಟವಾದ ಎರಡು ವರ್ಷದ ಬಳಿಕ ಧಾರವಾಡ ಕಸಾಯಿ ಖಾನೆ ಪಕ್ಕ ಹಾದು ಹೋಗುವಾಗ ಎತ್ತೊಂದರ ಧ್ವನಿ ಕೇಳಿಸಿದೆ. ಹತ್ತಿರ ಹೋಗಿ ನೋಡಿದರೆ ಅದು ತಮ್ಮದೇ ಎತ್ತು ಎಂದು ಗುರುತಿಸಿದ್ದಾರೆ.

ನಾಗಪ್ಪ 52 ಸಾವಿರ ರೂಪಾಯಿ ನೀಡಿ ಎತ್ತನ್ನು ಖರೀದಿ ಮಾಡಿದ್ದಾರೆ. ಸದ್ಯ ಮೈಲಾರಿ ಎಂಬ ಈ ಎತ್ತಿನ 19ನೇ ವರ್ಷದ ಜನ್ಮದಿನ ಆಚರಿಸಿ ಇಡೀ ಊರಿಗೆ ಊಟ ಹಾಕಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *