ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ – 19 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

Public TV
2 Min Read

-ಚನ್ನಣ್ಣನವರ್ ಸಿಐಡಿ ಎಸ್‍ಪಿ ಆಗಿ ನೇಮಕ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಆಗಿದ್ದು, ಬರೋಬ್ಬರಿ 19 ಮಂದಿ ಐಪಿಎಸ್ ಅಧಿಕಾರಗಳನ್ನು ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅಲೋಕ್ ಕುಮಾರ್ ವರ್ಗಾವಣೆಯಾಗಿದ್ದಾರೆ. ಐಜಿಪಿ ರ್‍ಯಾಂಕ್ ನಿಂದ ಎಡಿಜಿಪಿಗೆ ಬಡ್ತಿ ನೀಡಿ ಕಮಿಷನರ್ ಆಗಿ ನೇಮಕಗೊಂಡಿದ್ದು, ಟಿ.ಸುನಿಲ್ ಕುಮಾರ್ ವಿಭಾಗ ಎಡಿಜಿಪಿ ಆಗಿ ವರ್ಗಾವಣೆಯಾಗಿದ್ದಾರೆ.

ವರ್ಗಾವಣೆಯಾದ ಅಧಿಕಾರಿಗಳು:
* ಅಮ್ರಿತ್ ಪೌಲ್ –  ಈಸ್ಟರ್ನ್ ರೇಂಜ್ ಐಜಿಪಿ ಆಗಿ ವರ್ಗಾವಣೆ
* ಉಮೇಶ್ ಕುಮಾರ್ – ಬೆಂಗಳೂರು ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ವರ್ಗಾವಣೆ
* ಬಿ.ಕೆ ಸಿಂಗ್ – ಗೃಹ ಇಲಾಖೆಯ ಕಾರ್ಯದರ್ಶಿ (PCAS)ಯಾಗಿ ವರ್ಗಾವಣೆ
* ಸೌಮೆಂದು ಮುಖರ್ಜಿ-  ಬೆಂಗಳೂರು ಇಂಟರ್ನಲ್ ಸೆಕ್ಯುರಿಟಿ ಐಜಿಪಿ ಆಗಿ ವರ್ಗಾವಣೆ
* ಶ್ರಿ ರಾಘವೇಂದ್ರ ಸುಹಾಸ್ ಸದರನ್ – ರೇಂಜ್ ಐಜಿಪಿ ಆಗಿ ವರ್ಗಾವಣೆ
* ರವಿಕಾಂತೆ ಗೌಡ – ಸಿಸಿಬಿ ಮುಖ್ಯಸ್ಥರಾಗಿ ವರ್ಗಾವಣೆ
* ಅಮಿತ್ ಸಿಂಗ್ – ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ವಿಭಾಗದ ಎಸ್‍ಪಿ ಆಗಿ ವರ್ಗಾವಣೆ
* ರಾಮ್ ನಿವಾಸ್ ಸೆಪಟ್ – ಎಸಿಬಿ ಎಸ್‍ಪಿ ಆಗಿ ವರ್ಗಾವಣೆ


* ಎಂ.ಎನ್ ಅನುಚೇತ್‍ – ರೈಲ್ವೆ ಎಸ್‍ಪಿ ಆಗಿ ವರ್ಗಾವಣೆ
* ಬಿ.ರಮೇಶ್ – ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ಆಗಿ ವರ್ಗಾವಣೆ
* ರವಿ ಡಿ. ಚನ್ನಣ್ಣನವರ್ – ಸಿಐಡಿ ಎಸ್‍ಪಿ ಆಗಿ ವರ್ಗಾವಣೆ
* ಡಾ. ಭೀಮಾಶಂಕರ್ ಎಸ್ ಗುಳೇದ್ – ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ ಆಗಿ ವರ್ಗಾವಣೆ
* ಸಿ.ಬಿ ರಿಶ್ಯಂತ್ – ಮೈಸೂರು ಎಸ್‍ಪಿ ಆಗಿ ವರ್ಗಾವಣೆ
* ಸುಜೀತಾ-  ಕೆ.ಜಿ.ಎಫ್ ಗೆ ಎಸ್‍ಪಿ ಆಗಿ ವರ್ಗಾವಣೆ
* ಟಿಪಿ ಶಿವಕುಮಾರ್ – ಬೆಂಗಳೂರು ಗ್ರಾಮಾಂತರ ಎಸ್‍ಪಿ ಆಗಿ ವರ್ಗಾವಣೆ
* ಎನ್ ವಿಷ್ಣುವರ್ಧನ – ಬೆಂಗಳೂರು ಅಡಳಿತ ಡಿಸಿಪಿ ಅಗಿ ವರ್ಗಾವಣೆ
* ಕಲಾ ಕೃಷ್ಣ ಸ್ವಾಮಿ – ಎಫ್‍ಎಸ್‍ಎಲ್ ನಿರ್ದೇಶಕರಾಗಿ ವರ್ಗಾವಣೆ

Share This Article
Leave a Comment

Leave a Reply

Your email address will not be published. Required fields are marked *