ದೆಹಲಿಯ ಪಟಾಕಿ ಗೋದಾಮಿನಲ್ಲಿ ಬೆಂಕಿ- 17 ಮಂದಿ ಸಾವು, ಕಟ್ಟಡದಿಂದ ಜಿಗಿದು ಇಬ್ಬರು ಪಾರು

Public TV
1 Min Read

ನವದೆಹಲಿ: ಇಲ್ಲಿನ ಭಾವನ ಕೈಗಾರಿಕ ಪ್ರದೇಶದ ಪಟಾಕಿ ಗೋದಾಮಿಲ್ಲಿ ನಡೆದ ಬೆಂಕಿ ಅವಘಡದಲ್ಲಿ 10 ಮಹಿಳೆಯರು ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದಾರೆ.

ಶನಿವಾರ ಸಂಜೆ 6.20ರ ವೇಳೆಗೆ ದುರಂತ ಸಂಭವಿಸಿದ್ದು, ಸ್ಥಳಕ್ಕೆ 15ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಗಿಳಿಯಿತು. ಸಂಪೂರ್ಣವಾಗಿ ಬೆಂಕಿಯನ್ನ ಆರಿಸಿಸಲು 3 ಗಂಟೆಗಳ ಸಮಯ ಹಿಡಿಯಿತು. ತಡರಾತ್ರಿವರೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಿತ್ತು.

ಮೊದಲನೇ ಮಹಡಿಯಲ್ಲಿ 13 ಮಂದಿ, ನೆಲ ಮಹಡಿಯಲ್ಲಿ 3 ಮಂದಿ, ಬೇಸ್‍ಮೆಂಟ್‍ನಲ್ಲಿ ಓರ್ವ ಅಗ್ನಿಗಾಹುತಿಯಾಗಿದ್ದಾರೆ ಅಂತಾ ಅಗ್ನಿಶಾಮಕ ದಳ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ. ಮೂರು ಅಂತಸ್ತಿನ ಕಟ್ಟಡದ ಟೆರೆಸ್‍ನಿಂದ ಜಿಗಿದು ಮಹಿಳೆ ಹಾಗೂ ಓರ್ವ ಪುರುಷ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಇಬ್ಬರಿಗೂ ಗಾಯಗಳಾಗಿವೆ.

ಈ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದು ದುರಂತದಲ್ಲಿ ಸಾವು-ನೋವು ಹೆಚ್ಚಾಗಿದ್ದು ಬೇಸರ ಮೂಡಿಸಿದೆ. ಘಟನೆ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ ಅಂತಾ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಮೃತರ ಕುಟಂಬಕ್ಕೆ 5 ಲಕ್ಷ, ಗಾಯಾಳುಗಳಿಗೆ 1 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಪಟಾಕಿ ಫ್ಯಾಕ್ಟರಿಯ ಮಾಲೀಕ ಮನೋಜ್ ಜೈನ್‍ರನ್ನು ಪೊಲೀಸರು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *