ಸ್ನೇಹಿತನ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಹುಡುಗ

Public TV
1 Min Read

ಚಂಡೀಗಢ: ಸ್ನೇಹಿತನ ಪ್ರಾಣ ಉಳಿಸಲು ಕೊಳಕ್ಕೆ ಹಾರಿದ 16 ವರ್ಷದ ಹುಡುಗ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕ ಸೋನು ಎಂದು ಗುರುತಿಸಲಾಗಿದ್ದು, ಸೋನು ಮತ್ತು ಇತರ ನಾಲ್ವರು ಹುಡುಗರಾದ ಯಶ್, ಅಂಕಿತ್, ವಂಶ್ ಮತ್ತು ಆತನ ಸಹೋದರ ಮಧ್ಯಾಹ್ನದ ಸ್ನಾನ ಮಾಡಲು ಸಮಸ್‍ಪುರ ಗ್ರಾಮದ ಕೊಳಕ್ಕೆ ಹೋಗಿದ್ದರು. ಇದನ್ನೂ ಓದಿ: ಧರ್ಮದ ಹೆಸರಲ್ಲಿ ಬ್ರಾಹ್ಮಣರು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ: ಬಿಜೆಪಿ ನಾಯಕ

crime

ನಾಲ್ವರಲ್ಲಿ ಬಬ್ಬ ಹುಡುಗ ಮುಳುಗುತ್ತಿರುವುದನ್ನು ನೋಡಿದ ಸೋನು ಆತನನ್ನು ರಕ್ಷಿಸಲು ಪ್ರಯತ್ನಿಸಿ, ತಾನೇ ನೀರಿನಲ್ಲಿ ಮುಳುಗಿದ್ದಾನೆ. ಈ ವೇಳೆ ಸೋನುವನ್ನು ರಕ್ಷಿಸಲು ಪ್ರಯತ್ನಿಸಿದ ಸ್ನೇಹಿತರು ಮತ್ತು ಇತರ ಮೂವರು ಹುಡುಗರು ರಕ್ಷಿಸಲಾಗಿದೆ, ಈಜಿಕೊಂಡು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸೋನುವನ್ನು ನೀರಿನಿಂದ ಹೊರತೆಗೆದು, ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸೋನು ದಾರಿ ಮಧ್ಯೆಯೇ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಮೊಟ್ಟೆ ಕಾಳಗ: ಆ.26ಕ್ಕೆ ಮಡಿಕೇರಿಯಲ್ಲಿ ಕಾಂಗ್ರೆಸ್‌, ಬಿಜೆಪಿ ಮಧ್ಯೆ ಕೋಳಿ ಜಗಳ!

ಮತ್ತೊಂದೆಡೆ, ನಾಲ್ವರು ಬಾಲಕರು ನೀರಿನಲ್ಲಿ ಮುಳುಗಿದ್ದಾರೆ ಎಂದು ಗ್ರಾಮಸ್ಥರು ತಪ್ಪು ಮಾಹಿತಿ ನೀಡಿದ್ದರಿಂದ ನಾಲ್ಕು ಗಂಟೆಗಳ ಕಾಲ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಚಿಸಲಾಯಿತು. ಆದರೆ ಇತರ ಹುಡುಗರು ಪ್ರಾಣಾಪಾಯದಿಂದ ಪಾರಾಗಿರುವ ವಿಚಾರ ಪೊಲೀಸರಿಗೆ ನಂತರ ತಿಳಿದುಬಂದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *