ಕಾಂಗ್ರೆಸ್ ಶಾಸಕಾಂಗ ಸಭೆಗೆ 13 ಶಾಸಕರು ಗೈರು

Public TV
1 Min Read

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿದ್ದು, 13 ಮಂದಿ ಶಾಸಕರು ಗೈರು ಹಾಜರಿ ಹಾಕಿದ್ದಾರೆ.

66 ಜನ ಶಾಸಕರ ಹಾಜರಾತಿಯಲ್ಲಿ ಸಭೆ ಆರಂಭಗೊಂಡಿದೆ. ಶಾಸಕರು ಯಾಕೆ ಆಗಮಿಸಿಲ್ಲ ಎಂದು ಕೇಳಿದ್ದಕ್ಕೆ ದೇಶಪಾಂಡೆ, ನಿನ್ನೆ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಅವರೆಲ್ಲ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಹೀಗಾಗಿ ತಡವಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಗೈರು ಹಾಜರಿ ಹಾಕಿರುವ ಶಾಸಕರು:
ಗಣೇಶ್ ಹುಕ್ಕೇರಿ(ಚಿಕ್ಕೋಡಿ ಸದಲಗ), ಆನಂದ ಸಿಂಗ್(ವಿಜಯನಗರ), ನಾಗೇಂದ್ರ(ಕೂಡ್ಲಿಗಿ), ಭೀಮಾನಾಯಕ್(ಹಗರಿ ಬೊಮ್ಮನಹಳ್ಳಿ) ಜಮೀರ್ ಅಹಮ್ಮದ್(ಚಾಮರಾಜಪೇಟೆ), ಅಖಂಡ ಶ್ರೀನಿವಾಸಮೂರ್ತಿ(ಪುಲಿಕೇಶಿ ನಗರ), ತುಕಾರಾಂ(ಸಂಡೂರು), ಮಹಂತೇಶ್ ಕೌಜಲಗಿ (ಬೈಲಹೊಂಗಲ), ಶಿವಾನಂದ ಪಾಟೀಲ್(ಬಸವನಬಾಗೇವಾಡಿ), ಯಶವಂತ ರಾಯಗೌಡ(ಇಂಡಿ), ರಾಜೇಗೌಡ(ಶೃಂಗೇರಿ), ಸತೀಶ್ ಜಾರಕಿಹೊಳಿ(ಯಮಕನಮರಡಿ), ರಮೇಶ್ ಜಾರಕಿಹೊಳಿ(ಗೋಕಾಕ್), ಬಸವನಗೌಡ ದದ್ದಲ(ರಾಯಚೂರು ಗ್ರಾಮಾಂತರ), ದುರ್ಗಪ್ಪ ಹೂಲಗೇರಿ(ಲಿಂಗಸಗೂರು).

Share This Article
Leave a Comment

Leave a Reply

Your email address will not be published. Required fields are marked *