ನೀರಾ ಸೇವಿಸಿ ಬಾಲಕ ಸೇರಿ 12 ಮಂದಿ ಆಸ್ಪತ್ರೆಗೆ ದಾಖಲು

Public TV
1 Min Read

ಚಿಕ್ಕಬಳ್ಳಾಪುರ: ನೀರಾ ಸೇವಿಸಿದ್ದ 12 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ.

ತಾಲೂಕಿನ ಗುಟ್ಟಪಾಳ್ಯ ಗ್ರಾಮದ ಓರ್ವ ಬಾಲಕ ಸೇರಿ ಮೂವರು ಮಹಿಳೆಯರು, 8 ಮಂದಿ ಪುರುಷರು ಬಾಗೇಪಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂದಹಾಗೆ ಕೂಲಿ ಕಾಯಕಕ್ಕೆ ಎಂದು ಗಡಿಭಾಗದ ಆಂಧ್ರದ ಕಮ್ಮವಾರಪಲ್ಲಿಗೆ ತೆರಳಿದ್ದ ಈ 12 ಮಂದಿ ನೀರಾ ಸೇವಿಸಿದ್ದರು.

ನೀರಾ ಸೇವನೆ ಮಾಡಿದ್ದ 12 ಮಂದಿಗೆ ಮಾರನೇ ದಿನ ತೀವ್ರ ಹೊಟ್ಟೆನೋವು ಹಾಗೂ ಭೇದಿ ಕಾಣಿಸಿಕೊಂಡಿದೆ. ಹೀಗಾಗಿ 12 ಮಂದಿ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಗೇಪಲ್ಲಿ ಗಡಿಭಾಗದ ಆಂಧ್ರಪ್ರದೇಶದ ಹಳ್ಳಿಗಳಲ್ಲಿ ಈಚಲು ಮರಗಳಿಂದ ನೀರಾ ಇಳಿಸೋದು ಸೇವಿಸೋದು ಸಾಮಾನ್ಯವಾಗಿದೆ.

ರೈತ ಚಂದ್ರ ಎಂಬವರ ತೋಟಕ್ಕೆ ಟೊಮೆಟೋ ಗಿಡಗಳಿಗೆ ತಂತಿ ಕಟ್ಟೋಕೆ ಹೋಗಿದ್ದಾಗ 12 ಮಂದಿ, ರೈತ ಚಂದ್ರಪ್ಪ ತಂದಿದ್ದ ನೀರಾ ಸೇವನೆ ಮಾಡಿದ್ದರು. ಸದ್ಯ ಎಲ್ಲರೂ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *