ನಕ್ಸಲ್ ಪೀಡಿತ ಭಾಗಗಳಲ್ಲಿ ಮೊದಲ ಬಾರಿಗೆ ಚುನಾವಣೆ ಸಿದ್ಧತೆ – 12 ಮಾವೋವಾದಿಗಳು ಶರಣು

By
1 Min Read

ರಾಂಚಿ: ಜಾರ್ಖಂಡ್‌ನಲ್ಲಿ ನಕ್ಸಲ್ (Maoists) ಪೀಡಿತ ಭಾಗಗಳಲ್ಲಿ ಮೊದಲ ಬಾರಿ ಚುನಾವಣೆ (Lok Sabha Election 2024) ನಡೆಸಲು ಸಿದ್ಧತೆ ನಡೆದಿದ್ದು, ಚುನಾವಣೆಗೆ ಯಾವುದೇ ತೊಂದರೆಯಾಗದಂತೆ ನಕ್ಸಲರ ವಿರುದ್ಧ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಇದರ ಪರಿಣಾಮ ರಾಜ್ಯದ ಪಶ್ಚಿಮ ಸಿಂಗ್‍ಭೂಮ್ (West Singhbhum) ಜಿಲ್ಲೆಯಲ್ಲಿ 12 ಮಾವೋವಾದಿಗಳು ಭದ್ರತಾ ಸಿಬ್ಬಂದಿಯ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶರಣಾದ ಮಾವೋವಾದಿ ನಾಯಕ ಮಿಸಿರ್ ಬೆಸ್ರಾನ ತಲೆಯ ಮೇಲೆ 1 ಕೋಟಿ ರೂ. ಬಹುಮಾನವನ್ನು ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾವೋವಾದಿಗಳು ಏಷ್ಯಾದ ಅತಿದೊಡ್ಡ ಸಾಲ್ ಅರಣ್ಯ ಪ್ರದೇಶವಾದ ಸರಂದಾ ಮತ್ತು ಕೊಲ್ಹಾನ್‍ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಪಶ್ಚಿಮ ಸಿಂಗ್‍ಭೂಮ್‍ನ್ನು ದೇಶದ ಅತ್ಯಂತ ಎಡಪಂಥೀಯ ಉಗ್ರಗಾಮಿ ಪೀಡಿತ ಜಿಲ್ಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು 46 ಮಾವೋವಾದಿ ಸಂಬಂಧಿತ ಘಟನೆಗಳಿಗೆ ಸಾಕ್ಷಿಯಾಗಿದೆ. ಕಳೆದ ವರ್ಷ ಮಾವೋವಾದಿಗಳ ದಾಳಿಯಿಂದ 22 ಸಾವುಗಳು ಸಂಭವಿಸಿದ್ದವು.

ಮೇ 13 ರಂದು ಜಾಖರ್ಂಡ್‍ನ ಸಿಂಗ್‍ಭೂಮ್ ಲೋಕಸಭಾ ಕ್ಷೇತ್ರದ ನಕ್ಸಲ್ ಪೀಡಿತ ಸ್ಥಳಗಳಲ್ಲಿ ಮೊದಲ ಬಾರಿಗೆ ಮತದಾನಕ್ಕೆ ಸಿದ್ಧತೆ ನಡೆಸಲಾಗಿದೆ. ಈ ಭಾಗಗಳಿಗೆ ಚುನಾವಣಾ ಪರಕರಗಳು ಹಾಗೂ ಸಿಬ್ಬಂದಿಯನ್ನು ಸೇನಾ ಹೆಲಿಕಾಪ್ಟರ್ ಬಳಸಿ ಏರ್ ಲಿಫ್ಟ್ ಮಾಡುವ ಯೋಜನೆ ರೂಪಿಸಲಾಗಿದೆ.

Share This Article