ಜಪಾನ್ ಹಡಗಿನಲ್ಲಿದ್ದ ಕಾರವಾರದ ಅಭಿಷೇಕ್ ಸೇರಿದಂತೆ 119 ಭಾರತೀಯರು ವಾಪಸ್

Public TV
1 Min Read

– ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಭಾರತೀಯರು
– 4 ದೇಶಗಳ ಪ್ರಜೆಗಳನ್ನು ಕರೆತಂದ ಭಾರತ

ನವದೆಹಲಿ/ಕಾರವಾರ: ಜಪಾನ್ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿದ್ದ ಕಾರವಾರದ ಅಭಿಷೇಕ್ ಸೇರಿದಂತೆ 119 ಭಾರತೀಯರನ್ನು ಭಾರತ ಸರ್ಕಾರ ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿಯಾಗಿದೆ.

119 ಮಂದಿ ಭಾರತೀಯರಿದ್ದ ಏರ್ ಇಂಡಿಯಾ ವಿಶೇಷ ವಿಮಾನ ಟೋಕಿಯೋದಿಂದ ಹೊರಟು ಇಂದು ಬೆಳಗ್ಗೆ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

ಈ ವೇಳೆ ಸರ್ಕಾರ ಮಾನವೀಯತೆ ತೋರಿಸಿದ್ದು, ಹಡಗಿನಲ್ಲಿದ್ದ ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ, ಪೆರು ದೇಶದ ಪ್ರಜೆಗಳನ್ನು ಕರೆದುಕೊಂಡು ಬಂದಿದೆ.

ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಸಿಬ್ಬಂದಿ ಸೇರಿ 132 ಭಾರತೀಯರು ಸೇರಿ ಬೇರೆ ದೇಶದ 6 ಮಂದಿ ಪ್ರಯಾಣಿಸುತ್ತಿದ್ದರು. ಪರೀಕ್ಷೆ ನಡೆಸಿದ ವೇಳೆ 16 ಮಂದಿಯಲ್ಲಿ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಜಪಾನಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಳಿದ ಭಾರತೀಯರು ಇಂದು ಲ್ಯಾಂಡ್ ಆಗಿದ್ದಾರೆ.

ಅಭಿಷೇಕ್ ಅವರ ನವದೆಹಲಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಕಾರವಾರದ ಪದ್ಮನಾಭ ನಗರದ ಅಭಿಷೇಕ್ ಮನೆಗೆ ತರಳಿ ಸಂಪರ್ಕಿಸಲು ಪ್ರಯತ್ನಿಸಿದೆ. ಈ ವೇಳೆ ದೆಹಲಿಗೆ ಬಂದಿರುವ ಅಭಿಷೇಕ್ ಅವರನ್ನು ಹೆಚ್ಚಿನ ತಪಾಸಣೆಗೆ ಹರ್ಯಾಣಕ್ಕೆ ಕರೆದುಕೊಂಡು ಹೋಗಿದ್ದಾರೆ. 14 ದಿನಗಳ ಕಾಲ ಅವರ ಆರೋಗ್ಯವನ್ನು ಪರೀಕ್ಷಿಸಿ ಬಳಿಕ ಅವರು ಆಸ್ಪತ್ರೆಯಿಂದ ಹೊರ ಬರಲಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.

ಜಪಾನಿನ ಯೊಕೊಹಾಮ ಬಂದರಿನಿಂದ ಜ.20 ರಂದು ಹೊರಟಿದ್ದ ಡೈಮಂಡ್ ಪ್ರಿನ್ಸೆಸ್ ಹಡಗು ಜ.25 ರಂದು ಹಾಂಕಾಂಗ್ ತಲುಪಿತ್ತು. ಈ ವೇಳೆ ಕೊರೊನಾ ವೈರಸ್ ಹರಡಿತ್ತು. ಫೆ.1 ರಂದು ಯೊಕೊಹಾಮ ಬಂದ­ರಿನಲ್ಲಿ ನಿಂತಿದ್ದ ಈ ಹಡಗಿನಿಂದ ಯಾರೂ ಹೊರ ಬಾರದಂತೆ ದಿಗ್ಭಂದನ ವಿಧಿಸಲಾಗಿತ್ತು. ಇದಾದ ಬಳಿಕ ಹಡಗಿನಲ್ಲಿದ್ದ ಇಬ್ಬರು ವೃದ್ಧರು ಮೃತಪಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *