108 ವರ್ಷ ನಂತ್ರ ಕಾಶಿಗೆ ಅನ್ನಪೂರ್ಣೆ ವಿಗ್ರಹ

Public TV
1 Min Read

ವಾರಣಾಸಿ: ಅನ್ನಪೂರ್ಣೆ ವಿಗ್ರಹ ಕೆನಡಾದಿಂದ 108 ವರ್ಷ ನಂತರ ಕಾಶಿಗೆ ಮರಳಿ ತಂದಿದ್ದ ವಿಗ್ರಹವನ್ನು ಕಾಶಿ ವಿಶ್ವನಾಥ ದೇವಾಲಯದಲ್ಲಿ ನಿನ್ನೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿಷ್ಠಾಪನೆ ಮಾಡಿದ್ದಾರೆ.

ಈ ವಿಗ್ರಹಲವು 18ನೇ ಶತಮಾನದ್ದಾಗಿದ್ದು, ಸುಮಾರು 108 ವರ್ಷಗಳ ಹಿಂದೆ ಕಳವಾಗಿತ್ತು. ಬಳಿಕ ಕೆನಡಾದಲ್ಲಿ ಪತ್ತೆ ಆಗಿದ್ದ ಮೂರ್ತಿ, ಮೋದಿ ಸರ್ಕಾರದ ಪ್ರಯತ್ನದ ಫಲವಾಗಿ ಭಾರತಕ್ಕೆ ಮರಳಿದೆ. ಇದನ್ನೂ ಓದಿ:  ಜಗತ್ತಿನಲ್ಲಿ ಮೊಟ್ಟ ಮೊದಲು ವಿಮಾನ ಹಾರಿಸಿದವನು ರಾವಣನೇ?- ಲಂಕಾ ಅಧ್ಯಯನ

17 ಸೆಂ.ಮೀ ಎತ್ತರ, 9 ಸೆಂ.ಮೀ ಅಗಲ, 4 ಸೆಂ.ಮೀ ದಪ್ಪವಿರುವ ಈ ವಿಗ್ರಹವನ್ನು ಇರಿಸಲಾಗಿದ್ದ ಬೆಳ್ಳಿಯ ಪಲ್ಲಕ್ಕಿಗೆ ಯೋಗಿ ಆದಿತ್ಯನಾಥ್ ಅವರು ಸ್ವತಃ ಹೆಗಲ ನೀಡಿದರು. ಮಂತ್ರೋಚ್ಚರಣೆಯೊಂದಿಗೆ ದೇವಾಲಯ ಈಶಾನ್ಯ ಭಾಗದಲ್ಲಿ ಅನ್ನಪೂರ್ಣಾ ದೇವಿ ವಿಗ್ರಹ ಸೇರಿದಂತೆ ಈ ವಿಗ್ರಹವನ್ನೂ ಪ್ರತಿಷ್ಠಾಪಿಸಲಾಗಿದೆ. ಇದನ್ನೂ ಓದಿ: ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಮೋದಿ

108 ವರ್ಷಗಳ ಹಿಂದೆ ಅನ್ನಪೂರ್ಣ ಮಾತೆಯ ವಿಗ್ರಹವನ್ನು ಕಾಶಿಯಿಂದ ಕಳವು ಮಾಡಲಾಗಿತ್ತು. ಇದು ಕೈಯಿಂದ ಕೈಗೆ ಬದಲಾವಣೆ ಹೊಂದುತ್ತಾ ಕಡೆಗೆ ಕೆನಡಾದ ವಿಶ್ವವಿದ್ಯಾನಿಲಯದ ವಸ್ತು ಸಂಗ್ರಹಾಲಯ ತಲುಪಿತ್ತು. ಕೆನಡಾ ವಿಶ್ವವಿದ್ಯಾನಿಲಯದಿಂದ ವಿಗ್ರಹ ಮರಳಿಸುವ ಭಾರತ ಸರ್ಕಾರದ ಮನವಿಗೆ ಮನ್ನಣೆ ಸಿಕ್ಕಿದೆ. ಇದನ್ನೂ ಓದಿ:  ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್

Share This Article
Leave a Comment

Leave a Reply

Your email address will not be published. Required fields are marked *