1008 ಕೆಜಿಯ ಮೆಣಸಿನಕಾಯಿ ಯಾಗ

Public TV
1 Min Read

ದಾವಣಗೆರೆ: ಅಮಾವಾಸ್ಯೆಯ ಪ್ರಯುಕ್ತ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ 1008 ಕೆಜಿ ಮೆಣಸಿನಕಾಯಿಯ ಯಾಗ ಮಾಡಲಾಗಿದೆ.

ಶನಿವಾರ ಸುಭಂಜಪ್ಪ ಎಂಬವರ ಹೊಲದಲ್ಲಿ ಖಾಸಗಿ ಕಂಪನಿಯೊಂದರ ಸಹಯೋಗದೊಂದಿಗೆ ತೀಕ್ಷ್ಣ ಪ್ರತ್ಯಂಗಿರ ದೇವಿಗಾಗಿ 1008 ಕೆಜಿ ಒಣ ಮೆಣಸಿನಕಾಯಿ ಬಳಸಿ ಯಾಗ ನಡೆಸಲಾಯಿತು. ಗುರೂಜಿ ಅಘೋರ ಟೀನ್ ಗಣಪತಿ ರ್ಯಾಟ್ ಅವರಿಂದ ಹೋಮಕ್ಕೆ ಚಾಲನೆ ನೀಡಲಾಗಿತ್ತು.

ಅಂದುಕೊಂಡ ಬೇಡಿಕೆಗಳ ಈಡೇರಿಕೆಗಾಗಿ ಈ ಯಾಗವನ್ನು ಮಾಡುಲಾಗುತ್ತಿದು, ಅಮಾವಾಸ್ಯೆಯ ದಿನ ಯಾಗ ಮಾಡಿ ಮೆಣಸಿನಕಾಯಿಯನ್ನು ಹೋಮ ಕುಂಡದಲ್ಲಿ ಹಾಕಬೇಕು ಆಗ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆಯನ್ನು ಜನರು ಹೊಂದಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಪುರಾತನ ಕಾಲದಲ್ಲಿಯೂ ಈ ಹೋಮ ನಡೆಸಲಾಗುತ್ತಿತ್ತು. ಭಕ್ತರು ಭಕ್ತಿಯಿಂದ ಹೋಮಕ್ಕೆ ಪೂಜೆ ಸಲ್ಲಿಸಿ ಬುಟ್ಟಿಗಳಲ್ಲಿ ತಂದ ಮೆಣಸಿನಕಾಯಿಯನ್ನು ಅಗ್ನಿ ಕುಂಡಕ್ಕೆ ಹಾಕಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *