ಪೇಜಾವರ ಅಧೋಕ್ಷಜ ಟ್ರಸ್ಟ್ ವತಿಯಿಂದ ಕೇರಳ, ಕೊಡಗಿಗೆ ತಲಾ 10ಲಕ್ಷ ರೂ. ಪರಿಹಾರ

Public TV
2 Min Read

– ಶಿರೂರು ಬಗ್ಗೆ ಬಹಳ ಪ್ರೀತಿಯಿತ್ತು

ಬೆಂಗಳೂರು: ಕೊಡಗು ಮತ್ತು ಕೇರಳ ರಾಜ್ಯಕ್ಕೆ ಪೇಜಾವರ ಅಧೋಕ್ಷಜ ಟ್ರಸ್ಟ್ ವತಿಯಿಂದ ತಲಾ 10 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು ಅಂತ ಪೇಜಾವರ ವಿಶ್ವೇಶ ತೀರ್ಥ ಶ್ರೀ ಘೋಷಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಶೀಘ್ರದಲ್ಲೇ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾಗುವುದು ಅಂದ ಅವರು, ಸರ್ಕಾರ ಹಾಗೂ ರಾಜಕಾರಣಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ರು. ಪರಿಸರ ಕಾಳಜಿ ಇಲ್ಲದ ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ಕೇರಳ, ಕೊಡಗಿನಲ್ಲಿ ಇಂತಹ ಅನಾಹುತಗಳು ಆಗಿದೆ. ಈ ಬಗ್ಗೆ ವಿಜ್ಞಾನಿಗಳ ಜೊತೆ ಚರ್ಚೆ ನಡೆಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕೆಂದು ಸಲಹೆಯಿತ್ತರು.

ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಉಡುಪಿಯ ಪಾಜಕದಲದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಲಾಗ್ತಿದೆ. ಹುಬ್ಬಳ್ಳಿ, ರಾಯಚೂರು, ಕೊಪ್ಪಳ ವಿದ್ಯಾನಂದ ಗುರುಕುಲ ವಸತಿ ಶಾಲೆ ಕಾಲೇಜು ಆರಂಭಿಸಲಾಗುವುದು. ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಅಲ್ಲಿನ ಜನರ ಅಭಿಪ್ರಾಯ ಪಡೆಯಬೇಕು. ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಅಂದ್ರು.

ಎತ್ತಿನ ಹೊಳೆ ಯೋಜನೆಯೇ ಕೊಡಗಿನ ಸ್ಥಿತಿಗೆ ಕಾರಣ ಅನ್ನುವ ಮಾತುಗಳು ಕೇಳಿ ಬರ್ತಿದೆ. ಈ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ, ನಾನು ವಿಜ್ಞಾನಿ ಅಲ್ಲ. ಎತ್ತಿನ ಹೊಳೆ ಯೋಜನೆಯಲ್ಲಿ ರಾಜಕೀಯ ಮಾಡಲಾಗ್ತಿದೆ. ನಾನು ಎತ್ತಿನ ಹೊಳೆ ಯೋಜನೆ ವಿರೋಧಿ ಅಲ್ಲ. ಎತ್ತಿನ ಹೊಳೆ ಯೋಜನೆ ಉತ್ತಮ ಯೋಜನೆಯಾಗಿದೆ. ಸರ್ಕಾರ ಪರಿಶೀಲಿಸಿ, ವಿಚಾರ ಮಾಡಿ ಯೋಜನೆ ಮುಂದುವರಿಸಿ. ನಾನು ಪರಿಸರ ಪ್ರೇಮಿ. ಎತ್ತಿನ ಹೊಳೆ ಯೋಜನೆ ಅನುಷ್ಠಾನದಲ್ಲಿ ವಿಜ್ಞಾನಿಗಳ ಜತೆ ಚರ್ಚಿಸಿ ಪರಿಶೀಲನೆ ನಡೆಸಿ, ಪಕ್ಷಾತೀತವಾಗಿ ಚರ್ಚೆ ನಡೆಸಿ, ನಂತರ ತೀರ್ಮಾನ ಕೈಗೊಳ್ಳಲಿ ಅಂತ ಹೇಳಿದ್ರು.

ಸಮ್ಮಿಶ್ರ ಸರ್ಕಾರ ಕಾರ್ಯವೈಖರಿ ವಿಚಾರದ ಕುರಿತು ಮಾತನಾಡಿದ ಅವರು, ಸದ್ಯದ ರಾಜಕೀಯ ವಿದ್ಯಮಾನಗಳು ನನಗೆ ಬೇಸರ ತರಿಸಿದೆ. ಮೂರು ರಾಜಕೀಯ ಪಕ್ಷಗಳ ಬಗ್ಗೆ ಬೇಸರ ಇದೆ. ಒಬ್ಬರು ಮತ್ತೊಬ್ಬರನ್ನ ಟೀಕೆ ಮಾಡುವಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಮೂರು ಪಕ್ಷಗಳೂ ದ್ವೇಷ ಬಿಟ್ಟು ರಾಜ್ಯದ ಅಭಿವೃದ್ಧಿ ಕೈ ಜೋಡಿಸಲಿ ಎಂದು ಸಲಹೆ ನೀಡಿದ್ರು.

ಶಿರೂರು ಬಗ್ಗೆ ಪ್ರೀತಿಯಿತ್ತು:
ಶಿರೂರು ಶ್ರೀಗಳ ಬಗ್ಗೆ ಬಹಳ ಪ್ರೀತಿ ಇತ್ತು. ನಾನು ಮರಣೋತ್ತರ ದಲ್ಲಿ ಟೀಕೆ ಮಾಡಿದ್ದೆ ಎಂದು ಬಿಂಬಿಸಲಾಗಿತ್ತು. ನಾನು ಹಾಗೆ ಮಾತನಾಡಲಿಲ್ಲ. ಮದ್ಯ, ಮಾನಿನಿ ಸಹವಾಸ ಇದ್ದ ಕಾರಣ ಪಟ್ಟದ ದೇವರನ್ನ ಕೊಟ್ಟಿಲ್ಲ. ನನಗೆ ಶಿರೂರು ಶ್ರೀಗಳ ಮೇಲೆ ವೈಯುಕ್ತಿಕ ದ್ವೇಷ ಇಲ್ಲ. ಅವರಿಗೆ ಎಷ್ಟೋ ಸಲ ತೊಂದರೆ ಆದಾಗ ನಾನೇ ಅವರನ್ನ ಕಾಪಾಡಿದ್ದೇನೆ. ನನ್ನ ಮೇಲೆ ಅನೈತಿಕ ಆರೋಪ ಮಾಡಲಾಗ್ತಿದೆ. ಇದು ನನಗೆ ಬೇಸರ ತರಿಸಿದೆ. ಒಟ್ಟಿನಲ್ಲಿ ಸತ್ಯ ಏನು ಅನ್ನೋದು ಎಲ್ಲರಿಗೂ ಗೊತ್ತು. ನಾನು ನನ್ನ ಬಗ್ಗೆ ಕೇಳಿ ಬಂದಿರುವ ಆರೋಪದ ಬಗ್ಗೆ ಮಾತ್ರ ಪ್ರತಿಕ್ರಿಯೆ ನೀಡ್ತಿನಿ. ಶಿರೂರುವ ಶ್ರೀಗಳ ವಿಚಾರದಲ್ಲಿ ಮೊದಲಿನಿಂದಲೂ ಟೀಕೆ ಮಾಡ್ತಿದ್ದೆ. ಈಗಲೂ ಅದನ್ನೇ ಮಾಡ್ತಾ ಇದ್ದೀನಿ ಅಂತ ತಿಳಿಸಿದ್ರು.

ಉತ್ತರ ಭಾರತದಲ್ಲಿ ಹಿಂದೂ ನ್ಯಾಯಾಲಯ ಆರಂಭಿಸುವ ವಿಚಾರದ ಕುರಿತು ಹೆಚ್ಚಿಗೆ ಮಾತನಾಡಲ್ಲ. ಗೋಕರ್ಣ ಮಠ ಸರ್ಕಾರ ಅಧೀನಕ್ಕೆ ಪಡೆಯುವ ವಿಚಾರದ ಕುರಿತೂ ಹೆಚ್ಚು ಮಾತನಾಡೋಲ್ಲ ಅಂದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *