_ ಸಾಲಾಭಾದೆ ತಾಳಲಾರದೆ ರೈತ ಆತ್ಮಹತ್ಯೆ
– ಅತಿಯಾದ ಮಳೆಯಿಂದ ಬೆಳೆ ಹಾನಿ
ಗದಗ: 10 ಲಕ್ಷ ರೂ. ಸಾಲಮಾಡಿ ಬೆಳೆದಿರುವ ಫಸಲು ಹಾಳಾಗಿದೆ ಎಂದು ಮನನೊಂದು ರೈತ ಸಾಲಭಾದೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ.
ಆತ್ಮಹತ್ಯೆ ಶರಣಾದ ರೈತನನ್ನು ಶಿವಪ್ಪ ಮುರಗಿ (40) ಎಂದು ಗುರುತಿಸಲಾಗಿದೆ. ಮೃತ ರೈತ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನಭಾವನೂರ ಗ್ರಾಮದವರಾಗಿದ್ದಾರೆ.
ರೈತ ಶಿವಪ್ಪ ಎಸ್.ಬಿ.ಐ ಬ್ಯಾಂಕಲ್ಲಿ 7ಲಕ್ಷ ಸಾಲ ಹಾಗೂ ಕೈಸಾಲ 3 ಲಕ್ಷ ರೂಪಾಯಿ ಸಾಲವನ್ನು ಮಾಡಿಕೊಂಡಿದ್ದರು. ಈ ಹಣದಿಂದ 7 ಎಕರೆಯಲ್ಲಿ ಹತ್ತಿ, ಮೆಕ್ಕೆಜೋಳ ಬೆಳೆದಿದ್ದರು. ಆದರೆ ಈ ಭಾರಿ ಆಗಿರುವ ಅತಿಯಾದ ಮಳೆಯಿಂದ ಬೆಳೆದಿರುವ ಫಸಲು ಹಾಲಾಗಿದೆ. ಸಾಲಾ ಮಾಡಿ ಬೆಳೆದಿರುವ ಬೆಳೆ ಹಾಳಾಗಿದೆ ಎಂದು ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಷ ಸೇವಿಸಿದ ರೈತನನ್ನು ಶಿರಹಟ್ಟಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಾರ್ಗದ ಮಧ್ಯದಲ್ಲೇ ರೈತ ಮೃತಪಟ್ಟಿದ್ದಾರೆ. ಈ ಘಟನೆ ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.