10 ದಿನಗಳಿಂದ ಹೊತ್ತಿ ಉರಿಯುತ್ತಿದೆ ರಾಷ್ಟ್ರೀಯ ಉದ್ಯಾನವನ

Public TV
1 Min Read

ಭುವನೇಶ್ವರ: ಏಷ್ಯಾದ ಎರಡನೇ ಅತೀ ದೊಡ್ಡ ಬಯೋಸ್ಫಿಯರ್ ರಿಸರ್ವ್ ಎನಿಸಿಕೊಂಡಿರುವ ಒಡಿಶಾದ ಸಿಮ್ಲಿಪಾಲ ರಾಷ್ಟ್ರೀಯ ಉದ್ಯಾನದಲ್ಲಿ ಸುಮಾರು 10 ದಿನಗಳಿಂದ ಹೊತ್ತಿ ಉರಿಯುತ್ತಿದೆ.

ಕಳೆದ ವಾರ ಕಾಣಿಸಿಕೊಂಡ ದಿಢೀರ್ ಬೆಂಕಿಯಿಂದ ಅಪಾರವಾದ ವನ್ಯ ಸಂಪತ್ತು ಹಾನಿಗೊಳಗಾಗಿದೆ. ಈಗಾಗಲೇ ಕಾಡ್ಗಿಚ್ಚು ಮತ್ತಷ್ಟು ವಿಸ್ತರಿಸಿದ್ದು, ಉದ್ಯಾನವನದಲ್ಲಿ ಹೊತ್ತು ಉರಿಯುತ್ತಿರುವ ಬೆಂಕಿಯನ್ನ ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಸ್ಥಳದಲ್ಲಿ ಅರಣ್ಯ ಇಲಾಖೆ, ಹೆಚ್ಚುವರಿ ಸಿಬ್ಬಂದಿ ಮತ್ತು ಹೆಚ್ಚಿನ ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ. ಸಿಮ್ಲಿಪಾಲ ರಾಷ್ಟೀಯ ಉದ್ಯಾನವನವು ಹುಲಿ ಮೀಸಲು ಪ್ರದೇಶವಾಗಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ ಎಂದು ಒಡಿಶಾ ಸರ್ಕಾರ ವರದಿ ಮಾಡಿದೆ. ಆದರೆ ಪ್ರಾಣಿಗಳಿಗೆ ಹಾನಿಯಾಗಿದೆಯಾ ಅನ್ನೋದು ತಿಳಿದುಬಂದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *