ಹೆದ್ದಾರಿಯಲ್ಲಿ ರೈತನಿಗೆ ಗುದ್ದಿ, ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ವ್ಯಾನ್

Public TV
1 Min Read

– ಅತಿ ವೇಗಕ್ಕೆ ನಜ್ಜುಗುಜ್ಜಾದ ವ್ಯಾನ್ ಮುಂಭಾಗ
– ರೈತ, ವಾಹನ ಚಾಲಕ ಸ್ಥಳದಲ್ಲೇ ಸಾವು

ಚಂಡೀಗಢ: ವ್ಯಾನ್ ರೈತನಿಗೆ ಗುದ್ದಿ, ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ. ಕುಂಡಲಿ ಬಾರ್ಡರ್ ನಲ್ಲಿ ಶುಕ್ರವಾರ ತಡರಾತ್ರಿ ಅಪಘಾತ ಸಂಭವಿಸಿದೆ.

50 ವರ್ಷದ ರೈತ ಸುರೇಂದ್ರ ಮತ್ತು ಚಾಲಕ ರಾಜೇಶ್ ಅಪಘಾತದಲ್ಲಿ ಮೃತ ದುರ್ದೈವಿಗಳು. ಘಟನೆ ಸಂಬಂಧ ಸುರೇಂದ್ರ ಸಂಬಂಧಿ ಕುಂಡಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ರೈತ ತಮ್ಮ ಬೆಂಬಲಿಗರೊಂದಿಗೆ ದೆಹಲಿ ಗಡಿ ಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತೆರಳುತ್ತಿದ್ದರು.

ಮಾರ್ಗ ಮಧ್ಯೆ ರೈತರು ತಮ್ಮ ಟ್ರ್ಯಾಕ್ಟರ್ ಹೆದ್ದಾರಿ ಬದಿ ನಿಲ್ಲಿಸಿದ ವೇಳೆ ವೇಗವಾಗಿ ಬಂದ ವ್ಯಾನ್ ರೈತಬನಿಗೆ ಗುದ್ದಿದೆ. ನಂತರ ರಸ್ತೆ ಬದಿಯಲ್ಲಿ ನಿಲ್ಲಿಸಿದ ಟ್ರ್ಯಾಕ್ಟರ್ ಟ್ರೊಲಿಗೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತ ತೀವ್ರತೆಗೆ ವ್ಯಾನ್ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಮೃತ ಸುರೇಂದ್ರ ಪಂಜಾಬ್ ರಾಜ್ಯದ ನವಾಶಹರ್ ನಿವಾಸಿ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *