ಹೆಣ್ಣು ಮಗು ಆಗಿದ್ದಕ್ಕೆ ತಂದೆ ಆತ್ಮಹತ್ಯೆ- ಗಂಡನ ಸಾವಿನ ಬಳಿಕ ಪತ್ನಿಗೆ ಹೃದಯಾಘಾತ

Public TV
1 Min Read

– ಅನಾಥವಾದ ಹೆಣ್ಣು ಮಗು

ಅಗರ್ತಲಾ: ಹೆಣ್ಣು ಮಗು ಆಗಿದಕ್ಕೆ ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತ್ರಿಪುರದ ದಕ್ಷಿಣ ಅಗರ್ತಲಾದ ಗೌತಮ್ ನಗರದಲ್ಲಿ ನಡೆದಿದೆ. ಇತ್ತ ಗಂಡನ ಸಾವಿನ ಸುದ್ದಿ ಕೇಳಿ ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

23 ವರ್ಷದ ಸುಪ್ರಿಯಾ ದಾಸ್ ನಾಲ್ಕು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದ್ರೆ ಪತಿ ಪ್ರಾಣ್ ಗೋವಿಂದ್ ದಾಸ್ ಗಂಡು ಮಗುವಿನ ನಿರೀಕ್ಷೆಯಲ್ಲಿದ್ರು. ಹೆಣ್ಣು ಮಗು ಆಗಿದ್ದಕ್ಕೆ ನೊಂದಿದ್ದ ಪತ್ನಿಯ ಜೊತೆ ಪ್ರಾಣ್ ಜಗಳವಾಡಿದ್ದನು. ಭಾನುವಾರ ರಾತ್ರಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿ ಅಗರ್ತಲಾದ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಪತಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದ ಸುಪ್ರಿಯಾ ಗೆ ಹೃದಯಾಘಾತವಾಗಿದೆ.

ಪತಿ ಕುಟುಂಬಸ್ಥರು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಸುಪ್ರಿಯಾ ಅತ್ತೆ ಗಂಡು ಮಗುವಿಗಾಗಿ ಸೊಸೆಗೆ ಕಿರುಕುಳ ನೀಡುತ್ತಿದ್ರು. ಗಂಡು ಮಗು ಆದ್ರೆ ವಂಶ ಉದ್ಧಾರ ಆಗುತ್ತೆ ಅನ್ನೋ ನಂಬಿಕೆ ಹೊಂದಿದ್ದರು ಎಂದು ಸುಪ್ರಿಯಾ ನೆರೆಹೊರೆಯವರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *