ಹಿಂದಿನ ಸಾಲಿನಲ್ಲಿ ತಮ್ಮ ಕುರ್ಚಿ ಕಂಡು ಹೊರ ನಡೆದ ಪ್ರಜ್ಞಾ ಸಿಂಗ್

Public TV
1 Min Read

– ಸಿಎಂ ಆಗಮನಕ್ಕೂ ಮುನ್ನವೇ ಹೊರ ಬಂದ ಸಂಸದೆ

ಭೋಪಾಲ್: ತಮಗೆ ಹಿಂದೆ ಕುರ್ಚಿ ಹಾಕಿದ್ದಕ್ಕೆ ಕೋಪಗೊಂಡ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಹೊರ ಬಂದಿದ್ದಾರೆ. ಭೋಪಾಲ್ ನಗರದ ಬಿಜೆಪಿ ಕಚೇರಿಯಲ್ಲಿಯ ಸಭೆಗೆ ಪಕ್ಷದ ರಾಜ್ಯಾಧ್ಯಕ್ಷ, ಸಿಎಂ, ಪ್ರಜ್ಞಾ ಸಿಂಗ್ ಸೇರಿದಂತೆ ಹಲವು ಮುಖಂಡರನ್ನ ಆಹ್ವಾನಿಸಲಾಗಿತ್ತು.

ಡಿಸೆಂಬರ್ 25ರಂದ ಬಿಜೆಪಿ ಜಿಲ್ಲಾ ಕಾರ್ಯಲಯದ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಧ್ಯ ಪ್ರದೇಶದ ಬಿಜೆಪಿ ಅಧ್ಯಕ್ಷ ವಿಡಿ ಶರ್ಮಾ, ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಸಂಸದೆ ಪ್ರಜ್ಞಾ ಸಿಂಗ್ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಬರೋವರಿದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಆಗಮಿಸಿದ ಸಂಸದೆ ಪ್ರಜ್ಞಾ ಸಿಂಗ್ ವೇದಿಕೆ ಮೇಲೆ ಇರಿಸಲಾಗಿದ್ದ ಕುರ್ಚಿಗಳನ್ನ ಗಮನಿಸಿದ್ದಾರೆ.

ಹಿಂದಿನ ಸಾಲಿನಲ್ಲಿ ತಮಗೆ ಮೀಸಲಿರಿಸಿದ್ದ ಕುರ್ಚಿ ಕಂಡು ಕಚೇರಿಯಿಂದ ಹೊರ ಬಂದಿದ್ದಾರೆ. ಕಾರ್ಯಕ್ರಮಕ್ಕೂ ಆಯೋಜಕರು ಮನವೊಲಿಸಲು ಮುಂದಾದ್ರೂ ಪಕ್ಷದ ಮುಖಂಡರು ಮತ್ತು ಸಿಎಂ ಆಗಮನಕ್ಕೂ ಮೊದಲು ಹೊರ ಬಂದು ಬೇರೊಂದು ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಈ ವೇಳೆ ತಮಗೆ ಹಿಂದಿನ ಸಾಲಿನಲ್ಲಿ ಕುರ್ಚಿ ಹಾಕಿದ್ದರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *