ಹಾಸನ ಸಂಸದ ಪ್ರಜ್ವಲ್‌ರನ್ನು ಹಾಡಿ ಹೊಗಳಿದ ದರ್ಶನ್

Public TV
1 Min Read

ಹಾಸನ: ವಿಶ್ವಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದರ್ಶನ್‌ ಅವರು ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಹಾಡಿ ಹೊಗಳಿದ್ದಾರೆ.

ಸಂತೆಪೇಟೆ ಮೈದಾನದಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ಯಂಗ್ ಎಂಪಿಯನ್ನು ಆರಿಸಿದ್ದೀರಿ, ನಿಜಕ್ಕೂ ಅವರು ಇನ್ನಷ್ಟು ತ್ತರಕ್ಕೆ ಬೆಳೆಸಿ. ಸುಲಭವಾಗಿ ಜನರ ಕೈಗೆ ಸಿಗುವ ಎಂಪಿ ಪ್ರಜ್ವಲ್‌ ಎಂದು ಶ್ಲಾಘಿಸಿದರು.

ಪ್ರಜ್ವಲ್ ನಾನು 8 ವರ್ಷದಿಂದ ಸ್ನೇಹಿತರು. ಕೇರಳಕ್ಕೆ ನಾನು ಪ್ರಜ್ವಲ್ ಬೈಕ್ ಸವಾರಿ ಮಾಡಿದ್ದೆವು. ಕೇರಳಕ್ಕೆ ಹೋಗಿ ಬರುವ ತನಕ ಪ್ರಜ್ವಲ್ ಬೈಕ್ ಓಡಿಸಿದ್ದರು. ಇದು ಅವರ ತಾಯಿಗೂ ಗೊತ್ತಿಲ್ಲ ಎಂದು ಹಳೇಯ ನೆನಪನ್ನು ಮೆಲುಕು ಹಾಕಿದರು.

ಪ್ರಜ್ವಲ್‌ ರೇವಣ್ಣ ಮಾತನಾಡಿ, ದರ್ಶನ್ ಸರ್ ನೀವು ಅಭಿಮಾನಿಗಳಿಗೆ ಗದರಿಸಬೇಡಿ. ನಿಮ್ಮ ಹೆಸರು ಕೇಳಿದ್ರೆ ಅವರು ಕೇಕೆ ಹಾಕ್ತಾರೆ. ಅವರ ಹುಮ್ಮಸ್ಸು ಹೀಗೆ ಇರಲಿ. ಕುಗ್ಗಿಸಲು ಹೋಗಬೇಡಿ. ನನ್ನ ದರ್ಶನ್ ಸರ್ ಸ್ನೇಹ 8 ವರ್ಷದ್ದು. ಇದಕ್ಕೆ ರಾಜಕೀಯ ಬಣ್ಣ ಬೇಡ. ಕೆಲವರು ರಾಜಕೀಯ ಬಣ್ಣ ಕಟ್ಟುವ ಮಾತನಾಡಿದ್ದು, ನಮಗೆ ಗೊತ್ತಾಗಿದೆ. ಸ್ನೇಹವೇ ಬೇರೆ ರಾಜಕೀಯವೇ ಬೇರೆ. ಅದಕ್ಕೂ ಮೀರಿದ್ದು ನಮ್ಮ ದರ್ಶನ್ ಸ್ನೇಹ. ನಾನು ಯಾವುದೇ ರಾಜಕೀಯ ಲಾಭಕ್ಕೆ ದರ್ಶನ್ ಅವರನ್ನು ಈ ಕಾರ್ಯಕ್ರಮದಲ್ಲಿ ಬಳಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಭವಾನಿ ರೇವಣ್ಣ ಮಾತನಾಡಿ, ದರ್ಶನ್ ಈ ಕಾರ್ಯಕ್ರಮಕ್ಕೆ ಬಂದಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಒಬ್ಬ ಕಲಾವಿದರಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಾವು ನಮ್ಮ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ. ದರ್ಶನ್ ಅವರಿಗೆ ಅತಿಥಿ ಸತ್ಕಾರ ಮಾಡಿ ಕಳುಹಿಸುವುದು ನಮ್ಮ ಧರ್ಮ ಎಂದರು.

Share This Article
Leave a Comment

Leave a Reply

Your email address will not be published. Required fields are marked *