ಹನುಮ ಹುಟ್ಟಿದ ದಿನ ಗೊತ್ತಾ, ಸುಮ್ನೆ ತಿನ್ಲಾ- ಮಾಂಸಾಹಾರ ಭೋಜನ ಸವಿದ ಸಿದ್ದು

Public TV
1 Min Read

– ಚಿಕನ್ ತಿನ್ನುವಾಗ ಹನುಮಜಯಂತಿ ನೆನಪಿಸಿದ ಸ್ನೇಹಿತನಿಗೆ ಸಿದ್ದು ಉತ್ತರ

ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತದಾನ ಮಾಡಲು ತಮ್ಮ ಸ್ವ ಗ್ರಾಮ ಸಿದ್ದರಾಮನಹುಂಡಿಗೆ ತೆರಳಿದ್ದು, ಈ ವೇಳೆ ಸ್ನೇಹಿತರ ಮನೆಯಲ್ಲಿ ಮಾಂಸಾಹಾರ ಭೋಜನ ಸವಿದಿದ್ದಾರೆ.

ಸಿದ್ದರಾಮಯ್ಯನವರು ಹನುಮಜಯಂತಿಯಂದು ಮಾಂಸಾಹಾರ ಊಟಕ್ಕೆ ಕುಳಿತಿದ್ದು, ಈ ವೇಳೆ ಸ್ನೇಹಿತರೊಬ್ಬರು ಅಣ್ಣ ಇಂದು ಹನುಮಜಯಂತಿ ಎಂದು ನೆನಪಿಸಿದ್ದಾರೆ. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಸಿದ್ದರಾಮಯ್ಯ, ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು ನಿನಗೆ ಗೊತ್ತಾ? ಗೊತ್ತಿಲ್ಲ ತಾನೇ, ಏನು ಆಗಲ್ಲ ತಿನ್ಲಾ ಎಂದು ಗದರಿಸಿದ್ದಾರೆ.

ಹನುಮ ಹುಟ್ಟಿದ್ದ ದಿನಾಂಕ ಗೊತ್ತಿದ್ದರೆ ಮಾಡಬೇಕು. ಗೊತ್ತಿಲ್ಲ ಅಂದ್ರೆ ಚಿಕನ್ ತಿನ್ನು. ಚಿಕನ್ ತಿನ್ನಲು ಹನುಮ ಜಯಂತಿ ನೆಪ ಹೇಳಿದ ಸ್ನೇಹಿತನಿಗೆ ಸಿದ್ದು ಉತ್ತರಿಸಿದ್ದಾರೆ. ಸಿದ್ದರಾಮನಹುಂಡಿ ಗ್ರಾಮದ ಕೆಂಪೀರಯ್ಯ ಮನೆಯಲ್ಲಿ ಘಟನೆ ನಡೆದಿದೆ.

ಇದೇ ವೇಳೆ ಹಳೆ ನೆನಪುಗಳನ್ನು ಮೆಲುಕು ಹಾಕಿರುವ ಅವರು, ನಾನು ಮೊದಲು ದಿನ ಮೂರು ಹೊತ್ತು ನಾನ್‍ವೆಜ್ ತಿನ್ನುತ್ತಿದ್ದೆ. ಈಗ ಆಂಜಿಯೋಗ್ರಾಮ್ ಆದಮೇಲೆ ಕಡಿಮೆಮಾಡಿದ್ದೇನೆ. ಭಾನುವಾರ, ಬುಧವಾರ, ಶುಕ್ರವಾರ ನಾನ್‍ವೆಜ್ ತಿನ್ನುತ್ತೇನೆ. ಸಿಕ್ಕಾಪಟ್ಟೆ ಸಿಗರೇಟ್ ಸೇದುತ್ತಿದ್ದೆ. ಸ್ನೇಹಿತ ಮಹೇಶ್ ಫಾರಿನ್‍ನಿಂದ ಎರಡು ಬಂಡಲ್ ಸಿಗರೇಟು ತಂದು ಕೊಟ್ಟಿದ್ದ. ಕೂತ್ಕೊಂಡು ಎಲ್ಲವನ್ನೂ ಸೇದ್ಬಿಟ್ಟೆ. ಒಂದು ದಿನ ಟ್ರಿಪ್ ಗೆ ಹೋದಾಗ ನಾನು ಇಷ್ಟೋಂದು ಸಿಗರೇಟ್ ಸೇದುತ್ತೀನಿ ಏನಾಗ್ಬೇಡ ಎಂದು ಕೂತ್ಕೊಂಡು ಯೋಚನೆ ಮಾಡಿದೆ. ಬಳಿಕ ಒಂದು ವಾರ ಟ್ರಿಪ್‍ಗೆ ಹೋಗಿ ಬರೋವಷ್ಟರಲ್ಲಿ ಸಂಪೂರ್ಣ ಸಿಗರೇಟ್ ಬಿಟ್ಟೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *