ಹಣಕ್ಕಾಗಿ ಪೀಡನೆ – ತಂದೆ ಸತ್ಯಜೀತ್ ವಿರುದ್ಧ ಮಗಳಿಂದ ದೂರು

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಟ ಸತ್ಯಜಿತ್ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ತಂದೆ ಸತ್ಯಜಿತ್ ಹಣ ಕೊಡುವಂತೆ ಪ್ರತಿನಿತ್ಯ ಪೀಡಿಸುತ್ತಾ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಗಳು ಅಖ್ತರ್ ಸ್ವಲೇಹಾ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಪ್ಪನ ಜೀವನಾಂಶಕ್ಕೆ ತಿಂಗಳು 1 ಲಕ್ಷ ರೂಪಾಯಿ ದುಡ್ಡು ಕೊಡುತ್ತಿದ್ದೆ. ನಾನೀಗ ತುಂಬು ಗರ್ಭಿಣಿ, ಕೆಲಸಕ್ಕೆ ಹೋಗುತ್ತಿಲ್ಲ. ಹೀಗಾಗಿ ಮೊದಲಿನ ಹಾಗೆ ಸಹಾಯ ಮಾಡಲಾಗುತ್ತಿಲ್ಲ. ಹಣ ಕೊಡೋದು ನಿಲ್ಲಿಸಿದ್ದರಿಂದ ಅಪ್ಪನ ಟಾರ್ಚರ್ ಕೊಡಲು ಆರಂಭಿಸಿದ್ದಾರೆ. ಪ್ರತಿದಿನ ಬೆದರಿಕೆ ಕರೆಗಳು ಬರುತ್ತಿವೆ. ತಂದೆ ಸತ್ಯಜಿತ್ ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಎಂದು ಆರೋಪ ಬಾಣಸವಾಡಿ ಪೊಲೀಸರಿಗೆ ಮಗಳು ಲಿಖಿತ ದೂರು ನೀಡಿದ್ದಾರೆ.

ನಾನು ಮಗಳಿಂದ ಯಾವುದೇ ಹಣ ಕೇಳಿಲ್ಲ. ಮಗಳನ್ನು ಬಳಸಿ ಯಾರೋ ನನಗೆ ಡ್ಯಾಮೇಜ್ ಮಾಡಿದ್ದಾರೆ. ಮಗಳ ವಿದ್ಯಾಭ್ಯಾಸಕ್ಕೆ ಮನೆ ಮಾರಿದ್ದೇನೆ. ಮನೆ ಬಿಡಿಸಿಕೊಡಲು ಹೇಳಿದ್ದೇ ಅಷ್ಟೇ. ಸಾಯೋ ಟೈಮ್‍ನಲ್ಲಿ ಮಗಳ ಏಳಿಗೆ ಬಯಸುತ್ತೇನೆ. ಮಗಳೇ ನನ್ನ ವಿರುದ್ಧ ನಿಲ್ತಾಳೆ ಅಂತಾ ಅನ್ಕೊಂಡು ಇರಲಿಲ್ಲ ಎಂದು ಮಗಳ ಆರೋಪ ಕೇಳಿ ತಂದೆ ಸತ್ಯಜಿತ್ ಕಣ್ಣೀರು ಹಾಕಿದ್ದಾರೆ.

ಸತ್ಯಜಿತ್ ಮಗಳು ಅಖ್ತರ್ ಸ್ವಲೇಹಾ ವೃತ್ತಿಯಲ್ಲಿ ಪೈಲಟ್. ಪ್ರತಿಷ್ಠಿತ ಏರ್ ಲೈನ್ಸ್ ನಲ್ಲಿ ಕಂಪನಿಯಲ್ಲಿ ಪೈಲಟ್ ಆಗಿರುವ ಸ್ವಲೇಹಾ ಪ್ರತಿ ತಿಂಗಳು ಸತ್ಯಜಿತ್‍ಗೆ 1 ಲಕ್ಷ ಕೊಡುತ್ತಿದ್ದೇನೆ. ಆದರೆ ಈದೀಗ ಹಣ ಕೊಡಲು ಆಗುತ್ತಿಲ್ಲ ತಂದೆ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *