ಸ್ಫೋಟದ ಸ್ಥಳಕ್ಕೆ ಸುಧಾಕರ್ ಭೇಟಿ – ಕ್ರಷರ್ ಮಾಲೀಕರ ಬಂಧನಕ್ಕೆ ಆದೇಶ

Public TV
1 Min Read

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಯಾವುದೇ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿಲ್ಲ. ಶಿವಮೊಗ್ಗ ಪ್ರಕರಣದ ಬಳಿಕ ನಿರಂತರವಾಗಿ ಸಭೆ ನಡೆಸಿ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿತ್ತು. ಅಕ್ರಮ ಸ್ಫೋಟಕಗಳ ಸಂಗ್ರಹಕ್ಕೆ ಅವಕಾಶಕ ಕೊಡಬೇಡಿ ಅಂತ ಹೇಳಿದ್ದೆ. ಈ ಸಂಬಂಧ ಅಧಿಕಾರಿಗಳು ಅರಿವು ಮೂಡಿಸುವ ಕಾರ್ಯಕ್ರಮ ಸಹ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಭ್ರಮರವಾಸಿನಿ ಕ್ವಾರಿ ಮೇಲೆ ಎಸ್ಪಿ ದಾಳಿ ನಡೆಸಿ ನಿಯಮ ಉಲ್ಲಂಘಿಸಿದ ಕಾರಣ ಫೆಬ್ರವರಿ 07 ರಂದು ಕ್ವಾರಿ ಕ್ಲೋಸ್ ಮಾಡಿದ್ದರು. ಆದರೂ ಸ್ಫೋಟ ಸಂಭವಿಸಿರೋದು ದುರಂತ ಎಂದು ಸಚಿವ ಸುಧಾಕರ್ ಬೇಸರ ಹೊರ ಹಾಕಿದರು.

ಭ್ರಮರವಾಸಿನಿ ಮಾಲೀಕರು ಜಿಲೆಟಿನ್ ಕಡ್ಡಿಗಳನ್ನ ದಾಸ್ತಾನು ಮಾಡಿದ್ರು ಅಂತ ತಿಳಿದಿದೆ. ಅದೇ ದಾಸ್ತಾನು ಕಾಡಿನಲ್ಲಿ ಎಸೆದು ಹೋಗಲು ಬಂದಾಗ ಮೊಬೈಲ್ ಆನ್ ಮಾಡಿದಾಗ ಸ್ಫೋಟ ಸಂಭವಿಸಿರುವ ಸಾಧ್ಯತೆಗಳಿವೆ. ಪೊಲೀಸರು ಪ್ರಾಥಮಿಕ ತನಿಖೆ ಮಾಡಿ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಸ್ಫೋಟದಲ್ಲಿ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ. ಭ್ರಮರವಾಸಿನಿಯ ಮೂವರು ಮಾಲೀಕರ ಬಂಧನಕ್ಕಾಗಿ ತಂಡ ರಚನೆ ಮಾಡಲಾಗಿದ್ದು, ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಭ್ರಮರವಾಸಿನಿ ಕ್ರಷರ್ ನ ಮಾಲೀಕರು ಸ್ಥಳೀಯ ಬಿಜೆಪಿ ಮುಖಂಡ ನಾಗರಾಜು ಹಾಗೂ ಆಂಧ್ರಮೂಲದ ಶಿವಾರೆಡ್ಡಿ ಹಾಗೂ ರಾಘವೇಂದ್ರ ರೆಡ್ಡಿ ಅಂತ ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *