ಸೋಲಿನಲ್ಲಿ ಗೆಲುವು ಕಂಡಿದ್ದೇವೆ: ಡಿಕೆ ಶಿವಕುಮಾರ್

Public TV
1 Min Read

ಬೆಂಗಳೂರು: ಸೋಲಿನಲ್ಲಿ ಗೆಲುವನ್ನು ಕಂಡಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‍ರವರು ಹೇಳಿದ್ದಾರೆ.

ಇಂದು ನಡೆದ ವಿಧಾನಸಭಾ ಮತ್ತು ಲೋಕಸಭಾ ಉಪಚುನಾವಣೆಯ ಫಲಿತಾಂಶ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಇವತ್ತು ಇಡೀ ಭಾರತದಲ್ಲಿ ಒಂದು ದೊಡ್ಡ ಬದಲಾವಣೆ ಅಲೆ ನೋಡುತ್ತಾ ಇದ್ದೀರಿ, ಮತದಾರ ಕೊಟ್ಟ ತೀರ್ಪಿಗೆ ತಲೆಬಾಗಲೇಬೇಕು ಎಂದಿದ್ದಾರೆ.

 

ಪಶ್ಚಿಮ ಬಂಗಾಳ, ಕೇರಳದಲ್ಲಿ ಕಾಂಗ್ರೆಸ್ ಸೋತಿರಬಹುದು. ಆದರೆ ಜನ ಬಿಜೆಪಿಯ ಬದಲಾವಣೆಯನ್ನು ಬಯಸಿದ್ದಾರೆ. ತಮಿಳುನಾಡು, ಪಶ್ಚಿಮ ಬಂಗಾಳ, ಕರ್ನಾಟಕದಲ್ಲಿ ಬಿಜೆಪಿ ವಿರುದ್ಧವಾಗಿ ಮತ ಚಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಒಂದು ಸ್ಥಾನ ಗೆದ್ದಿದ್ದೇವೆ ಒಂದು ಸೀಟ್ ಫೈಟು ಕೊಟ್ಟಿದ್ದೇವೆ. ಸೋಲಿನಲ್ಲಿ ಗೆಲವು ಕಂಡಿದ್ದೇವೆ. ಸತೀಶ್ ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ ಕೊಟ್ಟಿದ್ದಾರೆ. ವಿಧಾನ ಸಭಾ ಸದಸ್ಯರಾಗಿದ್ದಾರು, ಅವರು ಟಿಕೆಟ್ ಕೇಳಿರಲಿಲ್ಲಾ. ಪಕ್ಷಕ್ಕಾಗಿ ನೀವು ಅಭ್ಯರ್ಥಿ ಮಾಡಿದ್ವಿ, ವರ್ತಕರಿಗೆ ರೈತರಿಗೆ ಮುಖಂಡರು ಒಂದು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. ಎಲ್ಲಾರಿಗೂ ಧನ್ಯವಾದಗಳು ಹಾಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಬಸವ ಕಲ್ಯಾಣದಲ್ಲಿ ಅಂತರ ಹೆಚ್ಚಾಗಿದೆ. ಮಸ್ಕಿಯ ಸ್ವಾಭಿಮಾನದ ಮತದಾರರು ಮತ ಕೊಟ್ಡಿದ್ದಾರೆ. ನನ್ನ ಹತ್ತಾರು ವರ್ಷದ ಅನುಭವದಲ್ಲಿ ಈ ಮೂರು ಚುನಾವಣೆಯಲ್ಲಿ ಒಗ್ಗಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಬೆಳಗಾವಿ ತೀರ್ಪು ಕಾಂಗ್ರೆಸ್ ಬದಲಾವಣೆ ನಂಬಿಕೆ ಕೊಟ್ಟಿದ್ದಾರೆ. ಯಾರು ಸಂಭ್ರಮಾಚರಣೆ ಮಾಡಬಾರದು ಎಂದು ತಿಳಿಸಿದರು.

ಎಷ್ಟು ಜೀವ ಉಳಿಸೋದಕ್ಕೆ ಸಾಧ್ಯಾನೋ ಅಷ್ಟು ಕೆಲಸ ಮಾಡಲು ಮನವಿ ಮಾಡಲಾಗುತ್ತಿದೆ. ಬಿಜೆಪಿಯನ್ನು ದೂರ ಮಾಡಬೇಕು. ಬಿಜೆಪಿ ದೇಶಕ್ಕೆ ದೊಡ್ಡ ಅಪಾಯಕಾರಿಯಾಗಿದೆ. ಒಂದು ಎರಡು ರಾಜ್ಯದಲ್ಲಿ ಕಾಂಗ್ರೆಸ್ ಚೇತರಿಕೆ ಕಂಡಿದೆ. ಬಿಜೆಪಿ ಎಂಟು ಭಾಗದ ಚುನಾವಣೆ ವ್ಯವಸ್ಥೆಯನ್ನು ನಾವು ವಿರೋಧ ಮಾಡಿದ್ವಿ. ಕಾಂಗ್ರೆಸ್ ಮೇಲೆ ವಿಶ್ವಾಸ ಹೆಚ್ಚಾಗುತ್ತಿದೆ. ಮಸ್ಕಿಯಲ್ಲಿ ಸ್ವಾಭಿಮಾನಕ್ಕೆ ಮತ ಕೇಳಿದ್ವಿ. ಅಲ್ಲಿ ಜನ ಅದನ್ನು ಗೌವರದಿಂದ ಮತಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *