ಸೆಣಸಾಟದಲ್ಲಿ ಚಿರತೆ, ನಾಯಿ ಸಾವು

Public TV
0 Min Read

ಮಂಡ್ಯ: ಸೆಣಸಾಟದಲ್ಲಿ ಚಿರತೆ ಮತ್ತು ನಾಯಿಗಳೆರಡು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕಳೆದ ರಾತ್ರಿ ಅಣ್ಣೆಚಾಕನಹಳ್ಳಿಯ ಹೊರವಲಯದಲ್ಲಿನ ಜಮೀನೊಂದರಲ್ಲಿ ಮಲಗಿದ್ದ ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಈ ವೇಳೆ ಚಿರತೆ ಮತ್ತು ನಾಯಿಯ ನಡುವೆ ಸೆಣಸಾಟ ನಡೆದಿದೆ. ಇದರಿಂದ ಚಿರತೆ ಮತ್ತು ನಾಯಿಗೆ ಗಂಭೀರವಾದ ಗಾಯಗಳಾಗಿವೆ.

ಚಿರತೆ ಮತ್ತು ನಾಯಿ ಎರಡು ಪ್ರಾಣಿಗಳ ಸೆಣಸಾಟದಲ್ಲಿ ಸ್ಥಳದಲ್ಲಿ ಸಾವನ್ನಪ್ಪಿವೆ. ಬೆಳಗ್ಗೆ ಗ್ರಾಮಸ್ಥರು ಈ ದೃಶ್ಯ ನೋಡಿ ಅರಣ್ಯ ಇಲಾಖೆಯ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *