ಸುಶಾಂತ್‍ನಂತೆ ಮ್ಯೂಸಿಕ್ ಇಂಡಸ್ಟ್ರಿಯಲ್ಲೂ ಆತ್ಮಹತ್ಯೆಯ ಸುದ್ದಿ ಬರಬಹುದು: ಸೋನು ನಿಗಮ್

Public TV
2 Min Read

ಮುಂಬೈ: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ ಅನೇಕ ನಟರು, ಗಾಯಕರು ಮತ್ತು ನಿರ್ದೇಶಕರು ಸಿನಿಮಾ ರಂಗದಲ್ಲಿ ನಡೆಯುತ್ತಿರುವ ಕೆಲ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಸದ್ಯ ಗಾಯಕ ಸೋನು ನಿಗಮ್ ಸಂಗೀತ ಉದ್ಯಮದ ಬಗ್ಗೆ ಮುಕ್ತವಾಗಿ ಮಾತನಾಡಿ ಆಘಾತಕಾರಿ ವಿಚಾರವನ್ನು ತಿಳಿಸಿದ್ದಾರೆ.

ಸೋನು ನಿಗಮ್ ವಿಡಿಯೋವನ್ನು ಹಂಚಿಕೊಂಡಿದ್ದು, ಯಾರ ಹೆಸರನ್ನು ಪ್ರಸ್ತಾಪಿಸದೆ ಮಾತನಾಡಿದ್ದಾರೆ. ಜೊತೆಗೆ ಮ್ಯೂಸಿಕ್ ಇಂಡಸ್ಟ್ರಿಯಲ್ಲಿರುವ ಮಾಫಿಯಾ ಹೊಸ ಮತ್ತು ಪ್ರತಿಭಾವಂತ ಗಾಯಕರ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸೋನು ನಿಗಮ್ ಹೇಳಿದ್ದೇನು?:
ನನ್ನ ಮನಸ್ಥಿತಿ ಚೆನ್ನಾಗಿಲ್ಲದ ಕಾರಣ ಕೆಲವು ದಿನಗಳವರೆಗೆ ನಿಮ್ಮೊಂದಿಗೆ ವಿಡಿಯೋ ಹಂಚಿಕೊಳ್ಳಲಿಲ್ಲ. ಇದೀಗ ಇಡೀ ಭಾರತವು ಅನೇಕ ಒತ್ತಡಗಳನ್ನು ಎದುರಿಸುತ್ತಿದೆ. ಒಂದು ಸುಶಾಂತ್ ಸಿಂಗ್ ರಜಪೂತ್ ಅವರ ಮಾನಸಿಕ ಮತ್ತು ಭಾವನಾತ್ಮಕ ಒತ್ತಡ. ನಮಗಿಂದ ಮೊದಲೇ ಅಗಲುತ್ತಿರುವ ಯುವಕರನ್ನು ನಾವು ನೋಡಿದರೆ ದುಃಖವಾಗುವುದು ಸಹ ಸಹಜ. ಇದಲ್ಲದೆ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆಯುತ್ತಿದೆ. ಇದರಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ನಾನು ಭಾರತೀಯನಿಗಿಂತ ಹೆಚ್ಚು ಮನುಷ್ಯ. ಈ ಎರಡೂ ವಿಷಯಗಳಿಂದ ನನಗೆ ತುಂಬಾ ಬೇಸರವಾಗಿದೆ.

ಬಾಲಿವುಡ್‍ನಲ್ಲಿ ಬೆಳೆಯಬೇಕಾದ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೇ ಸುದ್ದಿಯನ್ನು ಗಾಯಕ, ಮೂಸಿಕ್ ಕಾಂಪೋಸರ್, ಸಂಗೀತಗಾರನ ಬಗ್ಗೆಯೂ ಕೇಳಬಹುದಾದ ದಿನ ಬಹುಬೇಗ ಬರಬಹುದು. ಮೂಸಿಕ್ ಇಂಡಸ್ಟ್ರಿ ಮಾಫಿಯಾ ಸಿನಿಮಾಗಿಂತಲೂ ದೊಡ್ಡದಾಗಿದೆ. ಮೂಸಿಕ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಹೊಸ ಪ್ರತಿಭೆಗಳು ಉದ್ಯಮದಲ್ಲಿ ಏನು ನಡೆಯುತ್ತಿದೆ ಎಂದು ಅಸಮಾಧಾನಗೊಂಡಿದ್ದಾರೆ. ಮೂಸಿಕ್ ಇಂಡಸ್ಟ್ರಿ ಸಂಪೂರ್ಣವಾಗಿ ಇಬ್ಬರ ಕೈಯಲ್ಲಿ ಸಿಲುಕಿದೆ. ಅವರು ಹೇಳಿದ ಗಾಯಕರಿಗೆ ಮಾತ್ರ ಅವಕಾಶ ಸಿಗುತ್ತಿದೆ. ದಯವಿಟ್ಟು ನೀವು ಹೀಗೆ ಮಾಡಬೇಡಿ.

ಸಂಗೀತ ಉದ್ಯಮವು ಇಂದು ಎರಡು ಕಂಪನಿಗಳ ಕೈಯಲ್ಲಿದೆ. ನನ್ನ ಹಾಡುಗಳು ಇನ್ನೊಬ್ಬ ನಟನನ್ನು ನಿರ್ಧರಿಸುತ್ತವೆ. ಸೋನು ನನ್ನ ಹೆಸರನ್ನು ತೆಗೆದುಕೊಂಡನೆಂದು ಕೆಲವರು ಹೇಳುತ್ತಾರೆ. ಆದರೆ ಸೃಜನಶೀಲತೆ ಎನ್ನುವುದು ಕೇಲವ ಇಬ್ಬರ ಕೈಯಲ್ಲಿ ಇರಬಾರದು ಎಂದು ನಂಬುತ್ತೇನೆ. ನೀವೇ ಎಲ್ಲವನ್ನೂ ನಿರ್ಧರಿಸಿದರೆ, ಸಂಗೀತ ಹೇಗೆ ಉತ್ತಮವಾಗಿರುತ್ತದೆ? ಹಿಂದಿನ ಮೂಸಿಕ್ ಇಂಡಸ್ಟ್ರಿ ತುಂಬಾ ಚೆನ್ನಾಗಿತ್ತು. ರಾಜ್ ಕಪೂರ್, ಒಪಿ ನಾಯರ್ ಮತ್ತು ಶಂಕರ್ ಜೈ ಕಿಶನ್ ಅವರು ಒಬ್ಬರಿಗಿಂದ ಒಬ್ಬರು ವಿಭಿನ್ನರಾಗಿದ್ದರು. ಆದ್ದರಿಂದ ಯುವ ಗಾಯಕರಿಗೆ ಅವಕಾಶ ಕೊಡಿ ಇದು ನನ್ನ ಮನವಿ.

Share This Article
Leave a Comment

Leave a Reply

Your email address will not be published. Required fields are marked *