ಸಿಡಿ ಹಿಂದೆ ಬಿಜೆಪಿ ಪದಾಧಿಕಾರಿಯ ಕೈವಾಡ – ಯತ್ನಾಳ್

Public TV
1 Min Read

ಬೆಂಗಳೂರು: ಸಿಡಿ ಬಿಡುಗಡೆಯಲ್ಲಿ ಕಾಂಗ್ರೆಸ್‍ನವರು ಮಾತ್ರ ಅಲ್ಲ.ಬಿಜೆಪಿಯವರೂ ಇದ್ದಾರೆ. ಇಬ್ಬರೂ ಒಟ್ಟಾಗಿ ಸೇರಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಿಂಗ್ ಪಿನ್ ವ್ಯಕ್ತಿಯ ಮಗಳ ನಾಮಕರಣಕ್ಕೆ ಕಾಂಗ್ರೆಸ್ ಅಲ್ಲದೇ ಬಿಜೆಪಿಯವರ ಪೈಕಿ ಯಾರು ಹೋಗಿದ್ದಾರೆ ಎನ್ನುವುದು ಬಯಲಾಗಿದೆ. ಬಿಜೆಪಿಯ ಮೂರು, ನಾಲ್ಕು ಮಂದಿ ಇದ್ದಾರೆ. ಸಿಡಿ ಹಿಂದೆ ಬಿಜೆಪಿ ಪದಾಧಿಕಾರಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ.


ರಾಜ್ಯ ಪೋಲೀಸರಿಂದ ಈ ಪ್ರಕರಣದಲ್ಲಿ ನ್ಯಾಯ ಸಿಗುವುದಿಲ್ಲ. ಈ ಪ್ರಕರಣದಲ್ಲಿ ತುಂಬಾ ಜನರ ಕೈವಾಡವಿದ್ದು ವಿಸ್ತ್ರತ ತನಿಖೆಯಾಗಬೇಕು. ಹೀಗಾಗಿ ಸಿಬಿಐಗೆ ಪ್ರಕರಣವನ್ನು ಕೊಡಬೇಕು ಎಂದು ಆಗ್ರಹಿಸಿದರು.

ನಾನು ಯಾರ ಏಜೆಂಟ್ ಅಲ್ಲ. ಕುಟುಂಬ ರಾಜಕಾರಣ, ಭ್ರಷ್ಟಾಚಾರದ ವಿರುದ್ಧ ಹೋರಾಟ ಪ್ರತ್ಯೇಕವಾಗಿ ಮುಂದುವರಿಯುತ್ತದೆ. ನಾನು ಪಕ್ಷ ನಿಷ್ಟ, ಮೋದಿ ಅಭಿಮಾನಿ ಎಂದು ಯತ್ನಾಳ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *