ನವದೆಹಲಿ: ಸಮಾಜ ಸುಧಾರಕ ಜ್ಯೋತಿಬಾ ಫುಲೆರವರ ಜನ್ಮ ದಿನಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಗೌರವ ಸಲ್ಲಿಸಿದ್ದಾರೆ ಹಾಗೂ ಇವರ ಸಾಮಾಜಿಕ ಕಾರ್ಯಗಳು ಭವಿಷ್ಯದ ಪೀಳಿಗೆಗೆ ಸ್ಪೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು, ಜ್ಯೋತಿ ಬಾ ಫುಲೆಯವರು ಶ್ರೇಷ್ಠ ಚಿಂತಕ, ದಾರ್ಶನಿಕ ಮತ್ತು ಬರಹಗಾರ ಎಂದು ಶ್ಲಾಘಸಿದ್ದಾರೆ. ಅವರು ತಮ್ಮ ಜೀವನದೂದ್ದಕ್ಕೂ ಮಹಿಳಾ ಶಿಕ್ಷಣ ಹಾಗೂ ಮತ್ತು ಸಬಲೀಕರಣಕ್ಕೆ ಬದ್ದರಾಗಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
महान समाजसेवी, विचारक, दार्शनिक एवं लेखक महात्मा ज्योतिबा फुले की जयंती पर उन्हें कोटि-कोटि नमन। वे जीवनपर्यंत महिलाओं की शिक्षा और उनके सशक्तिकरण के लिए प्रतिबद्ध रहे। समाज सुधार के प्रति उनकी निष्ठा आने वाली पीढ़ियों को प्रेरित करती रहेगी।
— Narendra Modi (@narendramodi) April 11, 2021
1827ರಲ್ಲಿ ಮಹಾರಾಷ್ಟ್ರದಲ್ಲಿ ಹಿಂದೂಳಿದ ಜನಾಂಗದಲ್ಲಿ ಜನಿಸಿದ ಜ್ಯೋತಿಬಾ ಫುಲೆ ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಟ ನಡೆಸಿದರು ಹಾಗೂ ವಂಚಿತಗೊಂಡ ಸಮುದಾಯಗಳಿಗೆ ಶಿಕ್ಷಣ ಬಗ್ಗೆ ಉತ್ತೇಜಿಸುವಲ್ಲಿ ಶ್ರಮಪಟ್ಟರು. ಅಲ್ಲದೆ ಅವರ ಪತ್ನಿ ಸಾವಿತ್ರಿ ಬಾಯಿ ಫುಲೆ ದೇಶದ ಮೊದಲ ಮಹಿಳಾ ಶಿಕ್ಷಕಿ ಎಂದು ಕರೆಯಲಾಗುತ್ತದೆ. ಜೊತೆಗೆ ಸಾವಿತ್ರಿ ಬಾಯಿ ಫುಲೆ ಮಹಿಳೆಯರಿಗೆ ಶಿಕ್ಷಣವನ್ನು ಉತ್ತೇಜಿಸುವ ಪ್ರಯತ್ನಗಳಲ್ಲಿ ಪ್ರವರ್ತಕರು ಎಂದರು.