ಸಭೆಯಿಂದ ಹೊರ ಹೋಗಿ – ಮಾಸ್ಕ್ ಹಾಕದ ಅಧಿಕಾರಿಗೆ ಪ್ರಹ್ಲಾದ್ ಜೋಶಿ ಕ್ಲಾಸ್

Public TV
1 Min Read

ಧಾರವಾಡ: ಮಾಸ್ಕ್ ಇಲ್ಲದೇ ಸಭೆಗೆ ಆಗಮಿಸಿದ್ದ ಮಹಿಳಾ ಅಧಿಕಾರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತರಾಟೆಗೆ ತೆಗದುಕೊಂಡ ಘಟನೆ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.

ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ಇಂದು ಜೋಶಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ಸಭೆಯ ಮೊದಲು ಎಲ್ಲ ಅಧಿಕಾರಿಗಳು ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಕೇಂದ್ರ ಸಚಿವರ ಸಭೆಗೆ ಮಾಸ್ಕ್ ಇಲ್ಲದೇ ಮಹಿಳಾ ಅಧಿಕಾರಿ ಭಾಗಿಯಾಗಿದ್ದರು.

ವಿಶೇಷ ಭೂಸ್ವಾಧಿನಾಧಿಕಾರಿ ಶಾರದಾ ಕೋಲ್ಕಾರ್ ಅವರಿಗೆ ಕೇಂದ್ರ ಸಚಿವರು ಸಭೆಯಲ್ಲಿ ಮಾಸ್ಕ್ ಇಲ್ಲದೇ ಕುಳಿತಿದ್ದಕ್ಕೆ ತರಾಟೆಗೆ ತೆಗೆದುಕೊಂಡರು. ಮಾಸ್ಕ್ ಇಲ್ಲದೇ ಕುಳಿತಿದ್ದೀರಿ, ಮಾಸ್ಕ್ ಇಲ್ಲ ಅಂದರೆ ಹೊರಗೆ ಹೋಗಿ ಬಿಡಿ ಎಂದು ಕೇಂದ್ರ ಸಚಿವ ಜೋಶಿ ಗರಂ ಆಗುತಿದ್ದಂತೆಯೇ ಶಾರದಾ ಅವರು ಮಾಸ್ಕ್ ತರಿಸಿ ಹಾಕಿಕೊಂಡರು. ಸಚಿವರು ಗರಂ ಆಗುತ್ತಿದ್ದಂತೆಯೇ ಉಳಿದ ಅಧಿಕಾರಿಗಳು ಒಂದು ಕ್ಷಣ ಕಕ್ಕಾಬಿಕ್ಕಿಯಾದರು.

Share This Article
Leave a Comment

Leave a Reply

Your email address will not be published. Required fields are marked *