ಸದಾನಂದಗೌಡರು ದೈವಿ ಪುರುಷ, ಅವರ ಬಗ್ಗೆ ನಾನೇನು ಮಾತಾಡಲ್ಲ- ಡಿವಿಎಸ್‍ಗೆ ಯತ್ನಾಳ್ ಟಾಂಗ್

Public TV
1 Min Read

ವಿಜಯಪುರ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಶಾಸಕ ಬಸನಗೌಡ ಪಾಟೀಲ್ ನಡುವಿನ ಮಾಕ್ಸಮರ ಮುಂದುವರಿದಿದ್ದು, ಸದಾನಂದಗೌಡರು ದೈವಿ ಪುರುಷರು ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎನ್ನುವ ಮೂಲಕ ಟಾಂಗ್ ನಿಡಿದ್ದಾರೆ.

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಸದಾನಂದಗೌಡ ಅವರಿಗೆ ಅಭಿನಂದನೆಗಳು, ಟೀಕೆ ಮಾಡ್ತಾರೆ ಬಹಳ ಹಿರಿಯರಿದ್ದಾರೆ. ಕೇಂದ್ರ ಮಂತ್ರಿಯಾಗಿ ಯಶಸ್ವಿ ಆಗಿದ್ದರಿಂದ ಇವತ್ತು ಅವರು ರಾಸಾಯನಿಕ ಗೊಬ್ಬರದ ಮಂತ್ರಿ ಆಗಿದ್ದಾರೆ. ಅದಕ್ಕೆ ಮಾತನಾಡುತ್ತಾರೆ. ಇನ್ನು ಅವರಿಗೆ ಹಕ್ಕಿದೆ, ನನ್ನ ಮೇಲೆ ಪ್ರೀತಿ ಇದೆ. ನಾವಿಬ್ಬರೂ 1992ರಲ್ಲಿ ಒಟ್ಟಿಗೆ ಶಾಸಕರಾಗಿದ್ದೇವೆ. ನನಗಿಂತಲೂ ಅವರು ಹಿರಿಯರೇನಲ್ಲ. ನಮ್ಮ ಹಿರಿಯರು ಯಡ್ಡಿಯೂರಪ್ಪ, ಅನಂತಕುಮಾರ್, ಸದಾನಂದಗೌಡರು ನನ್ನ ಸಮಾನ ವಯಸ್ಕರರು ಎಂದರು.

ಅವರಿಗೆ ನನ್ನ ಮೇಲೆ ಪ್ರೀತಿ ಮೊದಲಿನಿಂದಲು ಇದೆ. ರಾಜ್ಯಾಧ್ಯಕ್ಷ ಇದ್ದಾಗಿನಿಂದ ಪ್ರೀತಿ ಇದೆ. ಆವಾಗ ಅವರು 6 ವರ್ಷ ಪಕ್ಷದಿಂದ ನನ್ನ ಉಚ್ಛಾಟನೆ ಮಾಡಿದ್ದರಲ್ಲ ಆಗಿನಿಂದ ಇದೆ. ಅವರು ದೈವಿ ಪುರುಷರು, ಎಲ್ಲ ಅನುಭವಿಸಿದ್ದಾರೆ. ರಾಷ್ಟ್ರೀಯ ನಾಯಕರು ನಮ್ಮಂತಹ ಸಾಮಾನ್ಯ ಶಾಸಕರ ಬಗ್ಗೆ ಮಾತನಾಡಬಾರದು ಎಂದು ಕಾಲೆಳದರು.

ಅವರು ರಾಷ್ಟ್ರಮಟ್ಟದ ನಾಯಕರು. ನಾವು ವಾಜಪೇಯಿ ಅವರ ಮಂತ್ರಿ ಮಂಡಲದಲ್ಲಿ ಮಂತ್ರಿ ಆದವರು. ಹಿರಿಯತನವನ್ನ ನೀವೆ ಲೆಕ್ಕ ಹಾಕಿ. ಅವರು ಏನೂ ಇರಲಾರದಾಗ ನಾವು ಕೇಂದ್ರ ಮಂತ್ರಿ ಆಗಿದ್ದೆವು. ಹೀಗಾಗಿ ನಾವು ಸಾಮಾನ್ಯ ಶಾಸಕ. ಅವರು ಈಗೀಗ ಮಂತ್ರಿ ಆಗಿದ್ದರೆ. ಅದಕ್ಕೆ ಅವರು ರಾಷ್ಟ್ರೀಯ ನಾಯಕರು ಎಂದು ಸದಾನಂದಗೌಡರಿಗೆ ವ್ಯಂಗ್ಯ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *