ಸಂಪುಟ ಸರ್ಜರಿಗೆ ಸೋಮವಾರ ಡೆಡ್‍ಲೈನ್ – ಇಲ್ಲವಾದಲ್ಲಿ ಡಿಸೆಂಬರ್‌ವರೆಗೆ ನೋ ಚಾನ್ಸ್..!

Public TV
1 Min Read

ಬೆಂಗಳೂರು: ಸಂಪುಟ ವಿಸ್ತರಣೆ ಇವತ್ತಾಗುತ್ತೆ, ನಾಳೆಯಾಗುತ್ತೆ ಅಂತ ಕಾಯ್ತಿರೋರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಸಂಪುಟ ಸರ್ಜರಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹೌದು. ಸಿಎಂ ದೆಹಲಿಯಿಂದ ವಾಪಸ್ಸಾಗಿ ಮೂರು ದಿನಗಳಾದರೂ ಸಿಎಂಗೆ ಇನ್ನೂ ವರಿಷ್ಠರಿಂದ ಕರೆ ಬಂದಿಲ್ಲ. ಸಿಎಂ ಮತ್ತು ಆಕಾಂಕ್ಷಿಗಳು ವರಿಷ್ಠರ ಕರೆಗಾಗಿ ಕಾಯುತ್ತಿದ್ದಾರೆ. ಇಂದು ಅಥವಾ ನಾಳೆ ಕರೆ ಬಂದ್ರೆ ಮಾತ್ರ ಸೋಮವಾರ ಸಂಪಟ ಸರ್ಜರಿ ಸಾಧ್ಯತೆಯಿದೆ.

ಕರೆ ಬರದಿದ್ರೆ ಮತ್ತೆ ಸಂಪುಟ ಸರ್ಜರಿ ಮುಂದೂಡಿಕೆಯಾಗುವುದು ಫಿಕ್ಸ್. ಇಂದು, ನಾಳೆ ಕರೆ ಬರದಿದ್ರೆ ಸಂಪುಟಕ್ಕೆ ಸರ್ಜರಿ ಯಾವಾಗ ನಡೆಯುತ್ತೆ?, ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬರೋವರೆಗೂ ನಡೆಯಲ್ವಾ ವಿಸ್ತರಣೆ ಎಂಬ ಪ್ರಶ್ನೆಯೂ ಮೂಡಿದೆ.

ಅಮಿತ್ ಶಾ ಅವರು ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಕ್ಕೆ ಬರಲಿದ್ದಾರೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಅಲ್ಲಿವರೆಗೂ ಸಂಪುಟ ಸರ್ಜರಿ ಅನುಮಾನ ಎಂಬಂತಾಗಿದೆ. ಈಗಾಗಲೇ ಕಮಲ ಪಾಳಯದಲ್ಲಿ ಕೂಡ ಅಮಿತ್ ಶಾ ಬರೋವರೆಗೂ ವಿಸ್ತರಣೆ ಡೌಟ್ ಅನ್ನೋ ಚರ್ಚೆ ನಡೀತಿದೆ.

ಈ ಮಧ್ಯೆ ಅಮಿತ್ ಶಾ ಇಂದು ತಮಿಳುನಾಡಿಗೆ ಆಗಮಿಸಲಿದ್ದಾರೆ. ಈ ವೇಳೆ ರಾಜ್ಯ ಬಿಜೆಪಿ, ಸರ್ಕಾರದ ಬಗ್ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯವ್ರಿಂದ ಮಾಹಿತಿ ಪಡೆಯುವ ಸಾಧ್ಯೆತೆಗಳಿವೆ. ಆದರೆ ಅಮಿತ್ ಶಾ, ರಾಜ್ಯ ಭೇಟಿವರೆಗೂ ಸಂಪುಟ ವಿಸ್ತರಣೆ ಬಗ್ಗೆ ಫೈನಲ್ ಮಾಡದಿರುವ ಸಾಧ್ಯತೆಯೇ ಹೆಚ್ಚಿದೆ. ಈ ಹೊಸ ಬೆಳವಣಿಗೆ ಸಚಿವಾಕಾಂಕ್ಷಿಗಳ ಟೆನ್ಷನ್ ಇನ್ನಷ್ಟು ಹೆಚ್ಚಿಸಿದೆ.

Share This Article
Leave a Comment

Leave a Reply

Your email address will not be published. Required fields are marked *