ಸಂಚಾರ ನಿಯಮ ಉಲ್ಲಂಘನೆ- ಕಾರು ತಡೆದ ಪೊಲೀಸರನ್ನೇ ಬಾನೆಟ್ ಮೇಲೆ ಹೊತ್ತೊಯ್ದ ಚಾಲಕ

Public TV
1 Min Read

– ಅದೃಷ್ಟವಶಾತ್ ಪೊಲೀಸ್ ಬಚಾವ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಯಾನಕ ಘಟನೆ ನಡೆದಿದ್ದು, ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಕಾರ್ ತಡೆದಿದ್ದಾರೆ. ಚಾಲಕ ಕಾರ್ ನಿಲ್ಲಿಸಿದೇ ಪೊಲೀಸ್ ಅಧಿಕಾರಿಯನ್ನೇ ಕಾರ್ ಬಾನೆಟ್ ಮೇಲೆ ಕೆಲ ಮೀಟರ್ ಗಳ ದೂರ ಕೊಂಡೊಯ್ದು ಕೆಳಗೆ ಕೆಡವಿದ್ದಾನೆ. ಈ ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ.

ದೆಹಲಿಯ ಧೌಲಾ ಕುವಾನ್ ಬಳಿ ಈ ಭಯಾನಕ ಘಟನೆ ನಡೆದಿದ್ದು, ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಕಾರ್ ತಡೆದಿದ್ದಾರೆ. ಈ ವೇಳೆ ಪೊಲೀಸರು ಕಾರ್‍ಗೆ ಅಡ್ಡಲಾಗಿ ನಿಂತಿದ್ದಾರೆ. ತಕ್ಷಣವೇ ಚಾಲಕ ಕಾರ್ ನಿಲ್ಲಿಸದೇ ಪೊಲೀಸ್ ಅಧಿಕಾರಿಯನ್ನು ಕಲ ಮೀಟರ್ ಗಳ ವರೆಗೆ ಬಾನೆಟ್ ಮೇಲೆಯೇ ಕರೆದೊಯ್ದಿದ್ದಾನೆ. ಈ ಘಟನೆ ದಕ್ಷಿಣ ದೆಹಲಿಯ ವಾಹನ ದಟ್ಟಣೆಯ ಪ್ರದೇಶಲ್ಲಿ ನಡೆದಿದೆ.

ಪೊಲೀಸ್ ಅಧಿಕಾರಿ ಕಳಗೆ ಬಿದ್ದರೆ ಅಪಾಯ ಎಂಬುದನ್ನು ಅರಿತು ಕೆಲ ಹೊತ್ತು ಬಾನಟ್ ಮೇಲೆಯೇ ನಿಂತಿದ್ದಾರೆ. ಚಾಲಕ ಅವರನ್ನು ಬೀಳಿಸಲು ಮನಬಂದಂತೆ ಕಾರ್ ತಿರುಗಿಸಿದ್ದಾನೆ. ಆದರೂ ಪೊಲೀಸ್ ಪಟ್ಟು ಬಿಡದೆ ಗಟ್ಟಿಯಾಗಿ ಹಿಡಿದು ನಿಂತಿದ್ದಾರೆ. ಚಾಲಕನ ವರ್ತನೆ ಅತೀರೇಕಕ್ಕೆ ಹೋಗುತ್ತಿದ್ದಂತೆ ಪ್ಲಾನ್ ಮಾಡಿ ಕಾರ್ ಅಂಚಿಗೆ ಬಂದು ಬಾನೆಟ್ ಬಿಟ್ಟು ಜಿಗಿದ್ದಿದ್ದಾರೆ. ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಸವಾರರು ವಾಹನಗಳನ್ನು ನಿಲ್ಲಿಸಿದ್ದಾರೆ. ಅದೃಷ್ಟವಶಾತ್ ಪೊಲೀಸ್ ಅಧಿಕಾರಿ ಬಚಾವ್ ಆಗಿದ್ದಾರೆ.

ನಂತರ ಕಾರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *