ಸಂಕಷ್ಟದಲ್ಲಿದ್ದ ರೈತನ ಕಲ್ಲಂಗಡಿ ಖರೀದಿಸಿ ಬಡವರಿಗೆ ವಿತರಿಸಿದ ಉಪ್ಪಿ ಫ್ಯಾನ್ಸ್

Public TV
1 Min Read

ಬೀದರ್: ಲಾಕ್‍ಡೌನ್ ನಿಂದ ಬೆಳೆದ ಹಣ್ಣು, ತರಕಾರಿಯನ್ನು ಮಾರಾಟ ಮಾಡಲಾಗಿದೆ ರೈತರು ಸಂಕಷ್ಟಕ್ಕೆ ಸಿಲುಕಿರುವ ರೈತರ ಬೆನ್ನಿಗೆ ನಟ ರಿಯಲ್ ಸ್ಟಾರ್ ಉಪೇಂದ್ರ ನಿಂತಿದ್ದಾರೆ. ಉಪೇಂದ್ರ ಅಭಿಮಾನಿಗಳು ಸಂಕಷ್ಟದಲ್ಲಿದ್ದ ರೈತನ ಕಲ್ಲಂಗಡಿ ಖರೀದಿಸಿ, ಬಡವರಿಗೆ ವಿತರಿಸಿದ್ದಾರೆ.

ಔರಾದ್ ತಾಲೂಕಿನ ರೈತ ಶಿವು ಮೊಕ್ತೆದಾರ್ ಬೆಳೆದ ಕಲ್ಲಂಗಡಿಯನ್ನು ಉಪೇಂದ್ರ ಖರೀದಿಸಿದ್ದರು. ಇಂದು ನಟ ಉಪೇಂದ್ರ ಅಭಿಮಾನಿಗಳು ಹಾಗೂ ಎನ್‍ಜಿಓ ಕನೆಕ್ಟ್ ನ ಸದಸ್ಯರು ನಗರದಲ್ಲಿ 5 ಟನ್ ಕಲ್ಲಂಗಡಿ ಹಂಚಿಕೆ ಮಾಡಿದ್ದಾರೆ. ನಟ ಉಪೇಂದ್ರ ಸೂಚನೆ ಮೇರೆಗೆ ಅವರ ಅಭಿಮಾನಿಗಳು ಬಡವರಿಗೆ, ನಿರ್ಗತಿಕರಿಗೆ, ಅಲೆಮಾರಿಗಳಿಗೆ ಕಲ್ಲಂಗಡಿ ಹಂಚಿಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಸಂಕಷ್ಟದಲ್ಲಿರುವ ರೈತನ ನೆರವಿಗೆ ನಿಲ್ಲುವ ಜೊತೆಗೆ ಬಡವರಿಗೆ ಕಲ್ಲಂಗಡಿ ಹಣ್ಣುಗಳು ಹಂಚಿಕೆ ಮಾಡಿ ರಿಯಲ್ ಸ್ಟಾರ್ ನಟ ಉಪೇಂದ್ರ ಸಾಮಾಜಿಕ ಕಳಕಳಿ ಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಕಲ್ಲಂಗಡಿ ಬೆಳೆಗಾರ- ರೈತನ ಬೆನ್ನಿಗೆ ನಿಂತ ಉಪೇಂದ್ರ

Share This Article
Leave a Comment

Leave a Reply

Your email address will not be published. Required fields are marked *