ಶ್ರೀರಾಮುಲುಗೆ ಎದುರಾದ ಸಂಕಷ್ಟ ನಿವಾರಣೆಗೆ ದೇವಿ ಮೊರೆ ಹೋದ ಅರ್ಚಕ

Public TV
1 Min Read

ಯಾದಗಿರಿ: ಸಚಿವ ಶ್ರೀರಾಮಲುಗೆ ಸಂಕಷ್ಟ ನಿವಾರಣೆಯಾಗಲೆಂದು ದೇವಿಗೆ ಪೂಜೆ ಸಲ್ಲಿಸಲಾಗಿದೆ. ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೆ ದೇವಸ್ಥಾನದ ಅರ್ಚಕ ಮರಿಸ್ವಾಮಿ ಪೂಜಾರಿವಿಶೇಷ ಅರ್ಚನೆ ಮಾಡಿದ್ದಾರೆ.

ಸೆಪ್ಟೆಂಬರ್ 16ಕ್ಕೆ ದೇವಿ ಸನ್ನಿಧಿಗೆ ಭೇಟಿ ನೀಡಿದ್ದ ಸಚಿವ ಶ್ರೀರಾಮುಲು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ದೇವಿ ಮೊರೆ ಹೋಗಿದ್ದರು. ಚೀಟಿಯಲ್ಲಿ ಡಿಸಿಎಂ ಮಸ್ಟ್ ಅಂತ ಬರೆದಿಟ್ಟು ಹರಕೆ ಹೊತ್ತಿದ್ದರು. ಇದೀಗ ಸ್ಥಾನ ಪಲ್ಲಟ ಗೊಂದಲ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕರು ದೇವಿಗೆ ಪೂಜೆ ಸಲ್ಲಿಸಿದ್ದಾರೆ.

ಶ್ರೀರಾಮುಲು ಮುಂದಿರುವ ಗೊಂದಲ ಬಗೆ ಹರಿಸಲು ಇಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತ ದಲ್ಲಿ ಅಮ್ಮನಿಗೆ ಪೂಜೆ ಸಲ್ಲಿಸಲಾಗಿದೆ. ಈ ವೇಳೆ ರಾಮುಲುಗೆ ಎದುರಾಗಿರುವ ಸಂಕಷ್ಟ ನಿವಾರಣೆಯಾಗಿ ರಾಜಕೀಯದಲ್ಲಿ ಉನ್ನತ ಸ್ಥಾನ ಸಿಗುವಂತೆ ದೇವಿಯಲ್ಲಿ ಬೇಡಿಕೊಳ್ಳಲಾಗಿದೆ. ಇದನ್ನೂ ಓದಿ: ನನ್ನನ್ನು ಕರ್ನಾಟಕದ ಡಿಸಿಎಂ ಮಾಡು- ದೇವರಿಗೆ ಶ್ರೀರಾಮುಲು ಲೆಟರ್

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಚಿವ ಶ್ರೀರಾಮುಲು ಅವರಿಗೆ ನಿನ್ನೆ ಡಬಲ್ ಶಾಕ್ ನೀಡಿದ್ದರು. ಈ ಮೂಲಕ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಬೇಕು ಎಂದಿದ್ದ ಶ್ರೀರಾಮುಲುಗೆ ತೀವ್ರ ನಿರಾಸೆ ಉಂಟಾಗಿತ್ತು. ಇಂದು ಸುಧಾಕರ್ ಅವರನ್ನು ಕರೆಸಿ ಸಿಎಂ ಶ್ರೀರಾಮುಲು ಜೊತೆ ಮಾತುಕತೆ ನಡೆಸಿದ್ದು, ಈ ವೇಳೆ ತನಗೆ ನೀಡುವ ಖಾತೆಯನ್ನು ನಿಭಾಯಿಸುವುದಾಗಿ ಶ್ರೀರಾಮುಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಡಿಸಿಎಂ ನಿರೀಕ್ಷೆಯಲ್ಲಿದ್ದ ಶ್ರೀರಾಮುಲುಗೆ ಒಂದೇ ಖಾತೆ

Share This Article
Leave a Comment

Leave a Reply

Your email address will not be published. Required fields are marked *