ಶೂ ಒದ್ದೆಯಾಗದಂತೆ ನೋಡಿಕೊಂಡ ಸಚಿವರ ವಿಡಿಯೋ ವೈರಲ್

Public TV
1 Min Read

ಚೆನ್ನೈ: ತಮಿಳುನಾಡಿನ ಮೀನುಗಾರಿಕೆ-ಮೀನುಗಾರರ ಕಲ್ಯಾಣ ಮತ್ತು ಪಶುಸಂಗೋಪನಾ ಸಚಿವ ಅನಿತಾ ರಾಧಾಕೃಷ್ಣನ್ ಅವರು ತಮ್ಮ ಶೂ ಒದ್ದೆಯಾಗದಂತೆ ನೋಡಿಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ.

ಸಮುದ್ರ ಕೊರೆತದ ಬಗ್ಗೆ ತನಿಖೆ ನಡೆಸಲು ಡಿಎಂಕೆ ಸಚಿವರು ಪಾಲವರ್ಕಡಿನಲ್ಲಿ ಸ್ಥಳೀಯರೊಂದಿಗೆ ಮಾತನಾಡಿ, ದೋಣಿ ವಿಹಾರವನ್ನು ಮಾಡಿದ್ದಾರೆ.

ಈ ಸಮಯದಲ್ಲಿ ದೋಣಿ ದಡಕ್ಕೆ ಬಂದಾಗ, ಮೀನುಗಾರರು ಸಚಿವರು ದೋಣಿಯಿಂದ ಇಳಿಯುವಂತೆ ಕುರ್ಚಿಯನ್ನು ಇರಿಸಿದ್ದಾರೆ. ಆದರೆ ತನ್ನ ಬೂಟೂಗಳನ್ನು ಒದ್ದೆಯಾಗಿಸಲು ಹಿಂಜರಿಯುತ್ತಿದ್ದ ಸಚಿವರನ್ನು ನೋಡಿ ಮೀನುಗಾರರು ಅವರ ಭುಜದ ಮೇಲೆ ಕುರಿಸಿಕೊಂಡು ಎತ್ತಿಕೊಂಡು ಹೋಗುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಇದು ವಿಐಪಿ ಸಂಸ್ಕೃತಿ ಎಂದು ಸಚಿವರನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ಮೋದಿ ಸಂಪುಟ ಪುನಾರಚನೆ – ಟ್ರೆಂಡಿಂಗ್ ಆದ ಅಣ್ಣಾಮಲೈ

ಅನಿತಾ ರಾಧಾಕೃಷ್ಣನ್ ಪ್ರತಿಕ್ರಿಯಿಸಿ, “ಅದರಲ್ಲಿ ಏನು ತಪ್ಪಿದೆ? ಅವರು ಪ್ರೀತಿಯಿಂದ ಕೇಳಿದ್ದಕ್ಕೆ ನಾನು ಅವರ ಹೆಗಲ ಮೇಲೆ ಹತ್ತಿದೆ. ಒಂದು ವೇಳೆ ನಾನು ಒತ್ತಾಯಿಸಿದರೆ ಅದು ತಪ್ಪು ಆಗುತ್ತದೆ. ಅವರೇ ಕೇಳಿಕೊಂಡ ಅದು ಹೇಗೆ ತಪ್ಪು? ಮೀನುಗಾರಿಕೆಯ ಮಂತ್ರಿಯಾಗಿ ಮೀನುಗಾರರ ಭುಜದ ಮೇಲೆ ಏರದೇ ಬೇರೆ ಯಾರ ಭುಜವನ್ನು ಏರಲು ಸಾಧ್ಯ ಎಂದು ಪ್ರಶ್ನಿಸಿ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *