ಶಿರಸಿ – ಶ್ರೀಗಂಧ ಕಳ್ಳನ ಬಂಧನ

Public TV
1 Min Read

ಕಾರವಾರ: ಶ್ರೀಗಂಧ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಮಾಲು ಸಮೇತ ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮರಾಠಿ ಕೊಪ್ಪದಲ್ಲಿ ನಡೆದಿದೆ. ಬಂಧಿತನಿಂದ ಆರೂವರೆ ಕೆಜಿ ತೂಕದ 65 ಸಾವಿರ ಮೌಲ್ಯದ ಶ್ರೀಗಂಧ, ಕೃತ್ಯಕ್ಕೆ ಬಳಸಿದ ವಸ್ತುಗಳು ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಶಿರಸಿಯ ಪುಣ್ನಮನೆಯ ಸಂತೋಷ್ ಮಹೇಶ್ ಮೊಗೇರ್ ಬಂಧಿತ ಆರೋಪಿ, ಪುಟ್ಟನಮನೆ ಅರಣ್ಯದಲ್ಲಿ ಶ್ರೀಗಂಧದ ಗಿಡ ಕಡಿದು ಮಾರಾಟಕ್ಕೆ ತೆರಳುತ್ತಿರುವಾಗ ಪೊಲೀಸರು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್‍ಪಿ ರವಿ ನಾಯ್ಕ್ ಹಾಗೂ ವೃತ್ತ ನಿರೀಕ್ಷಕ ಪ್ರದೀಪ್ ಬಿ.ಯು ರವರ ಮಾರ್ಗದರ್ಶನದಲ್ಲಿ ಹೊಸಮಾರುಕಟ್ಟೆ ಠಾಣೆಯ ಪಿಎಸ್‍ಐ ನಾಗಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಇಸ್ಮಾಯಿಲ್ ಕೊಣನಕೇರಿ, ರಾಮಯ್ಯ ಪೂಜಾರಿ, ಹನುಮಂತ್ ಮಾಕಾಪುರ, ಮೋಹನ ನಾಯ್ಕ್ ಕಾರ್ಯಾಚರಣೆ ತಂಡದಲ್ಲಿದ್ದರು. ಘಟನೆ ಸಂಬಂಧ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *