ಶಾಸಕರಿಗೆ ಕೊರೊನಾ – ಮಂಡಿಯಲ್ಲಿ ಮೆಟ್ಟಿಲೇರಿ ಅಭಿಮಾನಿಗಳಿಂದ ಪ್ರಾರ್ಥನೆ

Public TV
1 Min Read

ಹುಬ್ಬಳ್ಳಿ: ನವಲಗುಂದ ಶಾಸಕ ಶಂಕರಪಾಟೀಲ್ ಮುನೇನಕೊಪ್ಪರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೀಗ ಶಾಸಕ ಶಂಕರಪಾಟೀಲ್ ಅವರ ಅಭಿಮಾನಿಗಳು ಶಾಸಕರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಸಾಯಿಬಾಬಾ ಮಂದಿರದ ಮೆಟ್ಟಿಲುಗಳನ್ನು ಮಂಡಿಯಲ್ಲಿ ಏರಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 30ರಂದು ಶಾಸಕ ಶಂಕರಪಾಟೀಲ್ ಮುನೇನಕೊಪ್ಪರಿಗೆ ಸೋಂಕು ತಗುಲಿದ್ದು, ಶಾಸಕರು ಬೇಗನೇ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಹುಬ್ಬಳ್ಳಿ ನಗರದ ಶಿರಡಿನಗರದಲ್ಲಿರುವ ಸಾಯಿಬಾಬಾ ಮಂದಿರದ ಮೆಟ್ಟಿಲುಗಳನ್ನು ಮಂಡಿಗಾಲಿನಲ್ಲಿ ಏರಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಾಸಕರು ಶೀಘ್ರವೇ ಗುಣಮುಖರಾಗಲಿ ಎಂದು ಪೂಜೆ ಸಲ್ಲಿಸಿದ್ದಾರೆ. ಅವರ ಅಭಿಮಾನಿಗಳಾದ ಮಂಜುನಾಥ್ ಹೆಬಸೂರ. ವಿಜಯಕಾಂತ ನಿಡವಣಿ, ಶಂಕರಗೌಡ ಪಾಟೀಲ, ಸಂತೋಷ ಹಿರೇಮಠ, ಅಣ್ಣಪ್ಪ ಸೇರಿದಂತೆ ಹಲವಾರು ಅಭಿಮಾನಿಗಳು ಸಾಯಿಬಾಬಾ ಮಂದಿರ ಮೆಟ್ಟಿಲುಗಳನ್ನು ಮಂಡಿಗಾಲಿನಲ್ಲೆ ಏರಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *