ವೈಷ್ಣವಿ ಛತ್ರಿ, ದಿವ್ಯಾ ಸುರೇಶ್ ಬಕೆಟ್ ಎಂದ ಹೊಸ ಸ್ಪರ್ಧಿಗಳು

Public TV
1 Min Read

ಬಿಗ್‍ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕವಾಗಿ ಇಬ್ಬರು ಮಹಿಳಾ ಸ್ಪರ್ಧಿಗಳು ಒಂಟಿ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಈ ವಿಚಾರವಾಗಿ ಕೊಂಚ ಬೇಸರವಾಗಿದ್ದ ಸ್ಪರ್ಧಿಗಳಿಗೆ ಇನ್ನೊಂದು ವಿಷಯದಿಂದ ಮನೆಯವರಿಗೆ ಬೇಸರ ಉಂಟು ಮಾಡಿದೆ.

ಬಿಗ್ ಮನೆಗೆ ವೈಲ್ಡ್ ಕಾರ್ಡ್ ಮೂಲಕವಾಗಿ ಎಂಟ್ರಿಕೊಟ್ಟ ವೈಜಯಂತಿ ಹಾಗೂ ಪ್ರಿಯಾಂಕಾಗೆ ಒಂದು ಸ್ಪೆಷಲ್ ಟಾಸ್ಕ್‍ನ್ನು ಬಿಗ್‍ಬಾಸ್ ನೀಡಿದ್ದರು. ಈ ಟಾಸ್ಕ್ ಸಮಯದಲ್ಲಿ ಬಿಗ್‍ಮನೆಯ ಕೆಲವು ಸ್ಪರ್ಧಿಗಳಿಗೆ ಮುಖಕ್ಕೆ ಹೊಡೆದಂತೆ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಕೆಲವು ವಿಷಯವನ್ನು ನೇರವಾಗಿ ಹೇಳಿದ್ದಾರೆ. ಇದನ್ನು ಕೇಳಿದ ಮನೆಯ ಸ್ಪರ್ಧಿಗಳು ಖಂಡಿತವಾಗಿಯೂ ಆಶ್ಚರ್ಯದ ಜೊತೆಗೆ ಇರಿಸುಮುರಿಸು ಕೆಲವರಿಗೆ ಉಂಟಾಗಿದೆ.

ಮನೆಯ ಗಾರ್ಡ್‍ನ್ ಏರಿಯಾದಲ್ಲಿರುವ ಒಂದು ಪೆಟ್ಟಿಗೆಯಲ್ಲಿ ಕೆಲವು ವಸ್ತುಗಳಿವೆ. ಅವುಗಳನ್ನು ತೆಗೆದುಕೊಂಡು ಸೂಕ್ತ ಕಾರಣಗಳನ್ನು ನೀಡಿ ಮನೆಯ ಸದಸ್ಯರಿಗೆ ನೀಡಬೇಕು ಎಂದು ಬಿಗ್‍ಬಾಸ್ ಹೇಳಿದ್ದರು. ಈ ವೇಳೆ ವೈಜಯಂತಿ ನಾನು ಛತ್ರಿಯನ್ನು ವೈಷ್ಣವಿಗೆ ನೀಡುತ್ತೇನೆ ಎಂದು ಕೆಲವು ಕಾರಣಗಳನ್ನು ಹೇಳಿದ್ದಾರೆ.

ದಿವ್ಯಾ ಸುರೇಶ್‍ಗೆ ನಾನು ಬಕೆಟ್ ನೀಡುತ್ತನೆ. ಇವರಿಗೆ ಬಕೆಟ್ ಹಿಡಿದರೆ ದೊಡ್ಡ್ ಮನುಷ್ಯರು ಆಗುತ್ತಾರೆ ಎನ್ನುವ ಹಾಗೆ ಇದೆ ಎಂದು ಹೇಳುತ್ತಾ ದಿವ್ಯಾ ಅವರಿಗೆ ಬಕೆಟ್ ಕೊಟ್ಟಿದ್ದಾರೆ. ಈ ವೇಳೆ ದಿವ್ಯಾ ಸಪ್ಪೆಮೊರೆಯನ್ನು ಹಾಕಿಕೊಂಡಿದ್ದಾರೆ.

ನಾನು ಒಬ್ಬರ ಜೊತೆಗೆ ಕ್ಲೋಸ್ ಆಗಿದ್ದರೇನೇ ತಪ್ಪಾ ಎಂದು ದಿವ್ಯಾ, ಪ್ರಿಯಾಂಕ ಬಳಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಿಯಾಂಕ, ಮಂಜು ಅವರ ಬಾಲವನ್ನು ದಿವ್ಯಾ ಹಿಡಿದಿದ್ದಾರೆ ಎಂದು ಬರುತ್ತದೆ. ಸಖತ್ ಆಗಿರುವ ಹುಡುಗಿ ಹೀಗೆ ಇದ್ದಾಳೆ ಎಂದರೆ ಯಾರು ಯಾರ ಬಾಲವನ್ನು ಹಿಡಿಯ ಬೇಕು ಎಂದು ಹೇಳಿದ್ದಾರೆ. ಈ ವೇಳೆ ದಿವ್ಯಾ ನಕ್ಕು ಸುಮ್ಮನಾಗಿದ್ದಾರೆ.

ಮಂಜು ಮತ್ತು ದಿವ್ಯಾ ಮಾತನಾಡುತ್ತಾ ಕುಳಿತಿರುವಾಗ ನಾನು ಇಷ್ಟು ಚೆನ್ನಾಗಿದ್ದೇನೆ ಆದರೂ ನಾನು ಯಾಕೆ ಯಾವಾಗಲೂ ಹಿಂಗೆ ಎಂದು ಹೇಳಿದ್ದಾರೆ. ಮಂಜು ಮಾತ್ರ ಏನು ಮಾತನಾಡದೆ ಸುಮ್ಮನೇ ಕುಳಿತಿದ್ದಾರೆ. ಬಿಗ್‍ಬಾಸ್‍ಮನೆಯಲ್ಲಿ ಏನೋ ಒಂದು ನಡೆಯುತ್ತಿರುವುದು ಖಂಡಿತಾ ಹೌದು. ವೈಲ್ಡ್‍ಕಾರ್ಡ್ ಸ್ಪರ್ಧಿಗಳು ಮನೆಗೆ ಕಾಲಿಡುತ್ತಿದ್ದಂತೆ ಅಚ್ಚರಿ ಘಟನೆಗಳು ನಡೆಯುತ್ತಿರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *