ವೈಷ್ಣವಿಯಿಂದ ಇರಿಟೇಟ್ ಆಗ್ತಿದೆ ಅಂದ ಅರವಿಂದ್, ಶಮಂತ್

Public TV
1 Min Read

ಕೊರೊನಾದಿಂದ ಬಿಗ್‍ಬಾಸ್ ಕಾರ್ಯಕ್ರಮ ಅಂತಿಮ ಹಂತಕ್ಕೆ ತಲುಪಿದೆ. ಸದ್ಯ ವಾರದ ಕೊನೆಯ ದಿನ ಮನೆಮಂದಿಗೆ ಕಣ್ಮಣಿ ಕೇಳಿದ ಪ್ರಶ್ನೆಯೊಂದಕ್ಕೆ ಶಮಂತ್ ಹಾಗೂ ಅರವಿಂದ್ ವೈಷ್ಣವಿಯನ್ನು ಸಹಿಸಿಕೊಂಡು ಇದ್ದೀವಿ ಎಂದಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿ ನಿಧಿ ಹಾಗೂ ಶುಭಾ ಇವರಿಬ್ಬರ ನಡುವೆ ಯಾರು, ಯಾರನ್ನು ಹೆಚ್ಚಾಗಿ ಸಹಿಸಿಕೊಳ್ಳುತ್ತಾರೆ ಎಂದು ಕಣ್ಮಣಿ ಪ್ರಶ್ನಿಸಿದೆ. ಆಗ ಮನೆಯ ಸದಸ್ಯರು ಒಬ್ಬೊಬ್ಬರಾಗಿಯೇ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ಬರುತ್ತಾರೆ. ಈ ವೇಳೆ ಶಮಂತ್ ಸರದಿ ಬಂದಾಗ, ನನಗೆ ಮೊನ್ನೆಯಿಂದ ವೈಷ್ಣವಿಯವರು ಬ್ರೂಸ್ಲಿ, ಬ್ರೂಸ್ಲಿ ಅಂತಾ ಒಂದು ಜೋಕ್ ಹೇಳುತ್ತಿದ್ದಾರೆ. ಅದನ್ನು ಕೇಳಿ ತಲೆಯನ್ನ ಹೋಗಿ ಗೋಡೆಗೆ ಗುದ್ದಿಕೊಳ್ಳೋಣ ಎನ್ನುವಷ್ಟು ತಲೆ ಕೆಟ್ಟು ಹೋಗಿದೆ. ಅದರಲ್ಲಿ ಉತ್ತರ ಯಾವುದೋ, ಪ್ರಶ್ನೆ ಯೂವುದೋ ಅಂತ ಗೊತ್ತೆ ಆಗುತ್ತಿರಲಿಲ್ಲ. ಆದರೆ ಸಖತ್ ಆಗಿ ಇತ್ತು. ಸ್ವಲ್ಪನಾದರೂ ತಲೆಗೆ ಕೆಲಸ ಕೊಟ್ಟರು. ಸೋ ವೈಷ್ಣವಿಯವರನ್ನು ಸಹಿಸಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾರೆ.

ನಂತರ ಅರವಿಂದ್, ಸಹಿಸಿಕೊಳ್ಳುವುದೆಂದರೆ ಶಮಂತ್ ಹೇಳಿದಂತೆ ವೈಷ್ಣವಿ. ಯಾಕೆಂದರೆ ಕೆಲವೊಂದು ಬಾರಿ ಪಾಯಿಂಟ್ ಇಲ್ಲದಿರುವ ಜೋಕ್ ಹೇಳುತ್ತಿರುತ್ತಾರೆ. ಅದು ಡೈರೆಕ್ಷನ್‍ನಲ್ಲಿಯೂ ಇರುವುದಿಲ್ಲ. ಅದನ್ನು ಸ್ವಲ್ಪ ನುಂಗಿ, ನುಂಗಿ ಹೇಳುತ್ತಿರುತ್ತಾರೆ. ಅದಕ್ಕೆ ನಾನು ರೇಗಾಡಿಕೊಂಡು ಸಹಿಸಿಕೊಳ್ಳುತ್ತಿರುತ್ತೇನೆ. ಪಾಯಿಂಟ್ ಇಲ್ಲದೇ ಇರುವುದಕ್ಕೆ ರೇಗಾಡುತ್ತಿರುತ್ತೇವೆ ಹೊರತು ಜೋಕ್‍ಗೆ ರೇಗಾಡುವುದಿಲ್ಲ ಎನ್ನುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *