ವೈದ್ಯನ ಕಿರುಕುಳಕ್ಕೆ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ

Public TV
1 Min Read

ಯಾದಗಿರಿ: ಅಮ್ಮಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿವೆ. ವೈದ್ಯ ರಾಹಿಲ್ ವಿರುದ್ಧ ಅಸಮಾಧಾನ ಹೊರ ಹಾಕಿರುವ ಸಿಬ್ಬಂದಿ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ರೆ, ಕೆಲವರು ಕಣ್ಣೀರು ಸಹ ಹಾಕಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಠ ಅಮ್ಮಾಪುರದ ವೈದ್ಯ ಡಾ.ಎಂ.ಎಂ.ರಾಹೀಲ್ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ. ಡಾ.ಎಂ.ಎಂ.ರಾಹೀಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲಾಗಿ ಸಹೋದ್ಯೋಗಿಗಳಿಗೆ ಬೇಕಂತಲೇ ಹಾಜರಾತಿ ಕಡಿಮೆ ಹಾಕುವುದು. ವಿಶೇಷ ಭತ್ಯೆ ಕಟ್ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡ್ತಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಬಾಯಿ ಬಂದಂತೆ ನಿಂದಿಸುತ್ತಾರೆ. ರಾಹೀಲ್ ವರ್ತನೆಯಿಂದ ಆಸ್ಪತ್ರಗೆ ರೋಗಿಗಳು ಬರಲು ಭಯಪಡುತ್ತಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ವೈದ್ಯ ರಾಹಿಲ್ ನಿರ್ಲಕ್ಷ್ಯ ಔಷಧಿ, ಸ್ಯಾನಿಟೆರಿ ಪ್ಯಾಡ್ ಗಳು ಹಂಚಿಕೆಯಾಗಿದೆ ಆಸ್ಪತ್ರೆಯ ಮೂಲೆಯಲ್ಲಿ ಸೇರಿವೆ. ಆಸ್ಪತ್ರೆಗೆಂದು ಮಂಜೂರಾಗಿರುವ ಬೆಲೆ ಬಾಳುವ ವೈದ್ಯಕೀಯ ಪೀಠೋಪಕರಣಗಳು, ಕಚೇರಿ ಬಳಕೆ ವಸ್ತುಗಳು ಸಹ ತುಕ್ಕು ಹಿಡಿಯುತ್ತಿವೆ. ಈ ಎಲ್ಲಾ ವಿಚಾರವಾಗಿ ಹಿರಿಯ ಅಧಿಕಾರಿಗಳಿಗೆ ಸಿಬ್ಬಂದಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *