ವಿವಾಹಿತ ಪ್ರಿಯತಮೆಯನ್ನ ಕರೆ ತರಲು ಹೋದವ ಹೆಣವಾದ

Public TV
1 Min Read

– ಮದ್ವೆಯಾದ್ರೂ ನೀನು ನನಗೆ ಬೇಕೆಂದ!

ಲಕ್ನೋ: ವಿವಾಹಿತೆ ಪ್ರಿಯತಮೆಯನ್ನ ಕರೆ ತರಲು ಹೋಗಿದ್ದ ಯುವಕ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದ ಬನಾಕಟ್ ಠಾಣಾ ವ್ಯಾಪ್ತಿಯ ನೊನಾರ್ ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪಂಕಜ್ ಮಿಶ್ರಾ ಕೊಲೆಯಾದ ಯುವಕ. ಪಂಕಜ್ ಮತ್ತು ಮಿಠಿಯಾ ಗ್ರಾಮದ ಕಾಜಲ್ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಡಿಸೆಂಬರ್ 8ರಂದು ಪೋಷಕರ ಇಚ್ಛೆಯಂತೆ ನೊನಾರ್ ಗ್ರಾಮದ ವಿಕಾಸ್ ಪಾಂಡೆ ಜೊತೆ ಕಾಜಲ್ ಮದುವೆ ನಡೆದಿತ್ತು. ಇತ್ತ ಕಾಜಲ್ ಮದುವೆಯಿಂದ ನೊಂದಿದ್ದ ಪಂಕಜ್ ಆಕೆಯನ್ನ ಕಾಣಲು ಡಿಸೆಂಬರ್ 23ರಂದು ತಡರಾತ್ರಿ ನೊನಾರ್ ಗ್ರಾಮಕ್ಕೆ ತೆರಳಿದ್ದಾನೆ.

ಕಾಜಲ್ ಒಪ್ಪಿಗೆ ಮೇರೆಗೆ ಆಕೆಯನ್ನು ಕರೆದೊಯ್ಯಲು ಪಂಕಜ್ ತೆರಳಿದ್ದನು. ಆದ್ರೆ ಪತ್ನಿಯನ್ನ ಕಳುಹಿಸಲು ವಿಕಾಸ್ ಮತ್ತು ಆತನ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೂ ಹಠ ಬಿಡದ ಪಂಕಜ್ ಎಲ್ಲರ ಮುಂದೆಯೇ ಕಾಜಲ್ ಕೈ ಹಿಡಿದುಕೊಂಡು ಬರಲು ಪ್ರಯತ್ನಿಸಿದ್ದಾನೆ.

ಈ ವೇಳೆ ವಿಕಾಸ್ ಪಾಂಡೆ ಮತ್ತು ಪಂಕಜ್ ನಡುವೆ ಜಗಳ ಆರಂಭಗೊಂಡಿದೆ. ಇಬ್ಬರ ಗಲಾಟೆಯ ಸದ್ದು ಕೇಳಿ ಆಗಮಿಸಿದ ಗ್ರಾಮಸ್ಥರು ಪಂಕಜ್ ನನ್ನು ಥಳಿಸಿದ್ದಾರೆ. ಈ ಸಮಯದಲ್ಲಿ ಗ್ರಾಮಸ್ಥರೊಬ್ಬರು ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಥಳಿತಕ್ಕೊಳಗಾಗಿದ್ದ ಯುವಕನನ್ನ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಕೂಡಲೇ ಜಿಲ್ಲಾಸ್ಪತ್ರೆಗೆ ರವಾನಿಸುವಂತೆ ಪೊಲೀಸರಿಗೆ ತಿಳಿಸಿದ್ದರು. ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಪಂಕಜ್ ಸಾವನ್ನಪ್ಪಿದ್ದಾನೆ.

 

Share This Article
Leave a Comment

Leave a Reply

Your email address will not be published. Required fields are marked *