ವಿಮ್ಸ್ ಕೋವಿಡ್ ಕೇರ್ ಸೆಂಟರ್‌ನಿಂದ 300 ಜನ ಗುಣಮುಖ- ಕೇಕ್ ಕತ್ತರಿಸಿ ಬೀಳ್ಕೊಡುಗೆ

Public TV
1 Min Read

ಬಳ್ಳಾರಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾದ 300 ಮಂದಿಯನ್ನು ಬಿಡುಗಡೆ ಮಾಡಲಾಯಿತು.

ಇದಕ್ಕೂ ಮುನ್ನ ವೈದ್ಯರಾದ ಡಾ.ಅನಿಷ್, ಡಾ.ಪ್ರಶಾಂತ, ಡಾ.ಹಳ್ಳಿ ಕರಿಬಸಪ್ಪ, ಡಾ.ಲಿಂಗರಾಜ, ಡಾ.ಗೀತಾ ನೇತೃತ್ವದ ವೈದ್ಯರ ತಂಡ ಕೇಕ್ ಕತ್ತರಿಸುವ ಮೂಲಕ ಗುಣಮುಖರಾದವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.

ಕೇಕ್ ಮೇಲೆ ಕೋವಿಡ್ ರಿಕವರಿ ಎಂದು ಬರೆದಿದ್ದು ವಿಶೇಷ ಗಮನ ಸೆಳೆಯಿತು. ಬಳಿಕ ಮಾತನಾಡಿದ ಡಾ.ಅನಿಷ್, ಸೋಂಕಿನಿಂದ ಗುಣಮುರಾದವರ ಯೋಗಕ್ಷೇಮ ವಿಚಾರಿಸುವ ಮೂಲಕ ಆತ್ಮೀಯವಾಗಿ ಬೀಳ್ಕೊಡಲಾಯಿತು. ಉಳಿದ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಮತ್ತೊಬ್ಬರಿಗೆ ಸ್ಫೂರ್ತಿ ಆಗಲೆಂದು ಈ ಕಾರ್ಯಕ್ರಮವನ್ನು ಆಯೋಜಿ ಸಲಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *