ವಿನಯ್ ಕುಲಕರ್ಣಿಗೆ ಮತ್ತೆ ಕಸ್ಟಡಿಯೋ..ಕಂಬಿಯೋ..?- ಕೋರ್ಟ್ ಮುಂದೆ ಇಂದು ಹಾಜರು

Public TV
1 Min Read

ಹುಬ್ಬಳ್ಳಿ: ಧಾರವಾಡ ಜಿಲ್ಲಾಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐಗೆ ತಗ್ಲಾಕೊಂಡಿರುವ ಕಾಂಗ್ರೆಸ್ಸಿನ ಮಾಜಿ ಸಚಿವ ವಿನಯ್ ಕುಲಕರ್ಣಿ ವಿಲವಿಲ ಒದ್ದಾಡ್ತಿದ್ದಾರೆ. ಇದರ ನಡುವೆ ವಿನಯ್ ಕುಲಕರ್ಣಿಗೆ ಮತ್ತೆ ಕಸ್ಟಡಿನೋ..? ಕಂಬಿಯೋ ಅನ್ನೋದು ಇಂದು ನಿರ್ಧಾರವಾಗಲಿದೆ.

ವಿನಯ್ ಕುಲಕರ್ಣಿ ಸಿಬಿಐ ಸುಳಿಯಲ್ಲಿ ಸಿಲಕಿ ಒದ್ದಾಡುತ್ತಿದ್ದಾರೆ. ಕಳೆದೆರಡು ದಿನಗಳಿಂದ ತಮ್ಮ ಕಸ್ಟಡಿಯಲ್ಲಿರುವ ಕುಲಕರ್ಣಿಯನ್ನ ಸಿಬಿಐ ಅಧಿಕಾರಿಗಳು ದಾಖಲೆಗಳನ್ನಿಟ್ಟು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ನಾಶ, ಸುಳ್ಳು ದಾಖಲೆ ಸೃಷ್ಟಿ, ಪೊಲೀಸ್ ಇಲಾಖೆ ಮೇಲೆ ಒತ್ತಡ, ಹಂತಕರಿಗೆ ಆಶ್ರಯ, ಜೊತೆಗೆ ಕೊಲೆಯಾದ ಯೋಗೇಶ್ ಗೌಡರ ಪತ್ನಿಯನ್ನ ಪಕ್ಷಕ್ಕೆ ಕರೆತಂದಿದ್ದು. ಹೀಗೆ ಒಂದಲ್ಲ ಎರಡಲ್ಲ ಹಲವು ದಾಖಲೆ ಸಾಕ್ಷಿಗಳನ್ನಿಟ್ಟುಕೊಂಡು ವಿನಯ್ ಕುಲಕರ್ಣಿಯ ಸತ್ಯ ಬಾಯಿಬಿಡಿಸುವ ಪ್ರಯತ್ನ ಮಾಡಿದೆ.

ಹಂತಕರಿಗೆ ಹಣ ವಿತರಣೆಯಾದ ಬಗ್ಗೆ ಮಾಜಿ ಆಪ್ತ ಕಾರ್ಯದರ್ಶಿ ಸೋಮಲಿಂಗ ನ್ಯಾಮೇಗೌಡ, ಸಾಕ್ಷಿ ನಾಶಕ್ಕೆ ಸಹಕರಿಸಿದ ಸೋದರಮಾವ ಚಂದ್ರಶೇಖರ ಇಂಡಿ, ಯೋಗೀಶ್ ಗೌಡ ಪತ್ನಿ ಮಲ್ಲರನ್ನು ಕಾಂಗ್ರೆಸ್ಸಿಗೆ ಕರೆತಂದ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಹಾಗೂ ಮಲ್ಲಮ್ಮರನ್ನು ವಿನಯ್ ಕುಲಕರ್ಣಿ ಸಮ್ಮುಖದಲ್ಲೆ ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿದೆ.

ವಿನಯ್ ಕುಲಕರ್ಣಿಯ ಸಿಬಿಐ ಕಸ್ಟಡಿ ಅವಧಿ ಇಂದು ಮುಕ್ತಾಯಗೊಳ್ಳಲಿದ್ದು, ಕೋರ್ಟ್ ಮುಂದೆ ಹಾಜರಾಗಲಿದ್ದಾರೆ. ಮತ್ತಷ್ಟು ದಿನಗಳ ಕಾಲ ವಿನಯ್ ಕುಲಕರ್ಣಿಯನ್ನ ಸಿಬಿಐ ಕಸ್ಟಡಿ ಕೇಳೋ ಸಾಧ್ಯತೆ ದಟ್ಟವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *