ಲಾಕ್‍ಡೌನ್- ಅಂಗಡಿ ತೆರೆಯಲು ಲಂಚ ನೀಡದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

Public TV
1 Min Read

– ಪೊಲೀಸರ ಮೂಲಕ ಹಲ್ಲೆ ಮಾಡಿಸಿದ ಪೌರಾಯುಕ್ತ
– ಲಂಚ ನೀಡಿದವರಿಗೆ ಒಂದು ನ್ಯಾಯ, ನೀಡದಿರುವವರಿಗೆ ಒಂದು ನ್ಯಾಯ

ಯಾದಗಿರಿ: ಅಂಗಡಿ ತೆರೆಯುವುದಕ್ಕೆ ಲಂಚ ನೀಡದ ವ್ಯಾಪಾರಿಯ ಮೇಲೆ ಪೊಲೀಸರ ಮೂಲಕ ಪೌರಾಯುಕ್ತ ಹಲ್ಲೆ ಮಾಡಿಸಿದ ಘಟನೆ ಜಿಲ್ಲೆಯ ಶಹಪುರದಲ್ಲಿ ನಡೆದಿದೆ. ಲಾಕ್‍ಡೌನ ಸಡಿಲಿಕೆ ಹಿನ್ನೆಲೆ ಶಹಪುರದ ಕಿರಾಣಿ ಅಂಗಡಿಗಳಿಗೆ ಪೌರಾಯುಕ್ತ ರಮೇಶ್ ಸಾವಿರಾರು ರೂಪಾಯಿ ಲಂಚದ ಬೇಡಿಕೆ ಇಡುತ್ತಿದ್ದಾರೆ.

ಲಂಚ ನೀಡಿದವರಿಗೆ ವ್ಯಾಪಾರಕ್ಕೆ ಸಮಯ ಹೆಚ್ಚು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ರಮೇಶ್ ಓರ್ವ ಕಿರಾಣಿ ವ್ಯಾಪಾರಿಗೆ ಲಂಚದ ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಯ ಮಾತಿಗೆ ವ್ಯಾಪಾರಿ ಆಗುವುದಿಲ್ಲ ಎಂದು ಉತ್ತರಿಸಿದ್ದಾರೆ. ಇದರಿಂದಾಗಿ ಪೌರಾಯುಕ್ತ ರಮೇಶ್ ಪೊಲೀಸರಿಗೆ ಕುಮ್ಮಕ್ಕು ನೀಡಿ ನಡು ರಸ್ತೆಯಲ್ಲಿ ಮನ ಬಂದಂತೆ ವ್ಯಾಪಾರಿಗೆ ಥಳಿಸಿದ್ದಾರೆ. ಆಕ್ರೋಶಗೊಂಡ ವ್ಯಾಪಾರಿಗಳು ಶಹಪುರ ನಗರಸಭೆಗೆ ಮುತ್ತಿಗೆ ಹಾಕಿ, ಪೊಲೀಸರ ಮತ್ತು ನಗರಸಭೆ ಸಿಬ್ಬಂದಿ ದೌರ್ಜನ್ಯ ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ನಾಳೆಯಿಂದ ಎಲ್ಲ ರೀತಿಯ ವ್ಯಾಪಾರ ವಹಿವಾಟು ನಿಲ್ಲಿಸಲು ನಿರ್ಧಾರ ಮಾಡಿದ್ದಾರೆ. ಸುದ್ದಿ ತಿಳಿದ ಸಹಾಯಕ ಆಯುಕ್ತ ಪ್ರಶಾಂತ್, ವ್ಯಾಪಾರಿಗಳ ಸಂಧಾನಕ್ಕೆ ಪ್ರಯತ್ನ ಪಟ್ಟರು. ಆದರೆ ಎಸಿ ಮಾತಿಗೆ ಬಗ್ಗದ ವ್ಯಾಪಾರಸ್ಥರು, ರಮೇಶ್ ಮತ್ತು ಪೊಲೀಸರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *