ಲಸಿಕಾ ಕೇಂದ್ರದಲ್ಲಿ ಗಳ ಗಳನೇ ಅತ್ತ ವಿದ್ಯಾರ್ಥಿನಿ

Public TV
1 Min Read

ಧಾರವಾಡ: ಕೊರೊನಾ ಲಸಿಕಾ ಕೇಂದ್ರದಲ್ಲಿ ಬೆಳಗ್ಗೆಯಿಂದ ಸರದಿಯಲ್ಲಿ ನಿಂತು ಸುಸ್ತಾಗಿದ್ದ ವಿದ್ಯಾರ್ಥಿನಿ ಕಣ್ಣೀರಿಟ್ಟ ಪ್ರಸಂಗ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಜಿಲ್ಲಾ ಆಸ್ಪತ್ರೆಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದಿದ್ದ ವಿದ್ಯಾರ್ಥಿನಿ ವಿದ್ಯಾ ಬೆಳಗ್ಗೆಯಿಂದ ನಿಂತರೂ ವ್ಯಾಕ್ಸಿನ್ ಆರಂಭಿಸದ ಹಿನ್ನೆಲೆ ಕಣ್ಣಿರು ಹಾಕಿದ್ದಾಳೆ. ವ್ಯಾಕ್ಸಿನ್ ಬೇಗ ಆರಂಭ ಮಾಡದ ಹಿನ್ನೆಲೆ ಸ್ಥಳದಲ್ಲಿದ್ದ ಜನರು ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದರು. ಈ ವೇಳೆ ವಿದ್ಯಾ ಗಳಗಳನೇ ಅಳಲು ಆರಂಭಿಸಿದಳು.

ಬಿಎ ಪದವಿ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿರುವ ಈ ವಿದ್ಯಾರ್ಥಿನಿ, ಮಂಗಳವಾರದ ಸಹ ವ್ಯಾಕ್ಸಿನ್ ಗಾಗಿ ಬಂದು ಹೋಗಿದ್ದಳು. ಆದರೆ ಇವತ್ತೂ ವ್ಯಾಕ್ಸಿನ್ ಸಿಗಲ್ಲ ಎಂಬ ಭಯದಿಂದ ಆಕೆ ಕಣ್ಣೀರು ಹಾಕಿದ್ದಾಗಿ ವಿದ್ಯಾ ಜೊತೆ ಇದ್ದ ಗೆಳತಿಯರು ಹೇಳಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೆಳಗ್ಗೆ 6 ಗಂಟೆಯಿಂದಲೇ ಲಸಿಕೆಗಾಗಿ ಸರದಿಯಲ್ಲಿ ನಿಂತಿದ್ದರು. ಆದರೆ ವ್ಯಾಕ್ಸಿನ್ ಕೊಡಬೇಕಾದ ಸಿಬ್ಬಂದಿ ತಮಗೆ ಬೇಕಾದವರಿಗೆ ಆಸ್ಪತ್ರೆ ಒಳಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಕೆಲವರು ಆರೋಪಿಸಿದರು. ಅಲ್ಲದೇ ಆಸ್ಪತ್ರೆ ಸಿಬ್ಬಂದಿ ಜೊತೆ ಗಲಾಟೆಗೆ ಇಳಿದ ಜನ, ಆಸ್ಪತ್ರೆ ಒಳಗೆ ಕೂಡಾ ನುಗ್ಗಿದರು. ಕೆಲವರು ನಿನ್ನೆ ಕೂಡಾ ವ್ಯಾಕ್ಸಿನ್ ಗಾಗಿ ಬಂದು ವಾಪಸ್ ಆಗಿದ್ದಾರೆ. ಆದರೆ ನಿನ್ನೆ ವ್ಯಾಕ್ಸಿನ್ ಸಿಗದ ಹಿನ್ನೆಲೆ ಇವತ್ತು ಬಂದು ಸಾಲಿನಲ್ಲಿ ನಿಂತಿದ್ದರು. ಇದನ್ನೂ ಓದಿ: ಡ್ರಿಂಕ್ಸ್ ಮಾಡ್ತೀನಿ, ಸತ್ರೆ ಇಲ್ಲೇ ಸಾಯ್ತೀನಿ – ಲಸಿಕೆ ಪಡೆಯಲು ಕುಡುಕನ ಹಿಂದೇಟು

ಇತ್ತ ಬೆಂಗಳೂರಿನಲ್ಲಿಯೂ ಕೊರೊನಾ ಲಸಿಕೆಗೆ ಹಾಹಾಕಾರ ಶುರುವಾಗಿದೆ. ನಗರದ ಬಹುತೇಕ ಲಸಿಕಾ ಕೇಂದ್ರಗಳ ಮುಂದೆ ನೋ ಸ್ಟಾಕ್ ಬೋರ್ಡ್ ಕಂಡು ಬಂದಿದೆ. ಇತ್ತ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಇರಲಿಲ್ಲ. ಇದನ್ನೂ ಓದಿ: ವ್ಯಾಕ್ಸಿನ್ ಸೆಂಟರ್ ಮುಂದೆ No Stock ಬೋರ್ಡ್- ಮತ್ತೆ ಲಸಿಕೆಗಾಗಿ ಹಾಹಾಕಾರ

Share This Article
Leave a Comment

Leave a Reply

Your email address will not be published. Required fields are marked *