ರ್‍ಯಾಗಿಂಗ್ ರೂವಾರಿ ಚಕ್ರವರ್ತಿ, ಕ್ಷಮಿಸಿ ದಿವ್ಯಾ ಸುರೇಶ್: ಪ್ರಶಾಂತ್ ಸಂಬರಗಿ

Public TV
1 Min Read

ದಿವ್ಯಾ ಸುರೇಶ್ ವೈಯಕ್ತಿಕ ವಿಚಾರ ಕುರಿತಂತೆ ಅಣುಕಿಸಿದ್ದ ಪ್ರಶಾಂತ್ ಸಂಬರಗಿಯವರಿಗೆ ಶನಿವಾರ ಬಿಗ್‍ಬಾಸ್ ಪಂಚಾಯತಿಯಲ್ಲಿ ಪ್ರಶಾಂತ್ ಸಂಬರಗಿಯವರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಂತರ ತಮ್ಮ ತಪ್ಪನ್ನು ಅರಿತ ಪ್ರಶಾಂತ್ ಸಂಬರಗಿಯವರು ದಿವ್ಯಾ ಸುರೇಶ್ ಬಳಿ ಹೋಗಿ, ನೀನು ಡಿಗ್ರಿ ಕಾಲೇಜ್ ಪಿಕ್ಚರ್ ಮಾಡಿರುವುದರ ಬಗ್ಗೆ ನನಗೆ ಗೊತ್ತೆ ಇರಲಿಲ್ಲ. ಈ ಡ್ರಾಮವನ್ನೆಲ್ಲಾ ನನ್ನ ತಲೆಗೆ ಹಾಕಿದ್ದು ಚಕ್ರವರ್ತಿ. ನನಗೆ ಏನು ಗೊತ್ತಿರಲಿಲ್ಲ ನಾನು ಹೇಳುತ್ತೇನೆ, ನೀನು ರಿಯಾಕ್ಟ್ ಮಾಡು ಅಂತ ಹೇಳಿದ್ದರು. ನನ್ನನ್ನು ನೀನು ಕರ್ನಾಟಕದ ಜನತೆ ಮುಂದೆ ಸೆಕ್ಯೂರಿಟಿ ಗಾರ್ಡ್ ಎಂದು ಕರೆದಿದ್ದೆ, ಹಾಗಾಗಿ ನೀನು ನನಗೆ ಕ್ಷಮೆ ಕೇಳುತ್ತೀಯಾ ಎಂದು ಕೊಂಡಿದ್ದೆ. ನಿನಗೆ ನಾನು ಪ್ರತಿ ಬಾರಿ ಗೈಡೆನ್ಸ್ ನೀಡಿದ್ದೇನೆ. ಆದರೆ ಏನಾದರೂ ತಪ್ಪು ಮಾಡಿದ್ನಾ? ಎಂದು ಹೇಳುತ್ತಾ ಕ್ಷಮೆಯಾಚಿಸಿದ್ದಾರೆ.

ಇದಕ್ಕೆ ದಿವ್ಯಾ ಸುರೇಶ್ ಕೂಡ ನಾನು ನಿಮ್ಮ ಬಗ್ಗೆ ಆ ಹೇಳಿಕೆ ನೀಡಬಾರದಿತ್ತು ಸಾರಿ ಎಂದು ಕ್ಷಮೆ ಕೋರಿದ್ದಾರೆ. ನಂತರ ನೀನು ಸೆಕ್ಯೂರಿಟಿ ಗಾರ್ಡ್ ಎಂದಿದ್ದಕ್ಕೆ ಅಷ್ಟೇ ಕೋಪ ಇತ್ತು. ಆದರೆ ಇದರ ರೂವಾರಿ ಚಕ್ರವರ್ತಿ ಚಂದ್ರಚೂಡ್ ಎಂದು ಹೇಳಿದ್ದಾರೆ.

ಬಳಿಕ ಕಿಚ್ಚ ಸುದೀಪ್ ಮುಂದೆ ಕೂಡ ಈ ರ್‍ಯಾಗಿಂಗ್ ರೂವಾರಿ, ಸ್ಕ್ರಿಪ್ಟ್ ರೈಟರ್ ಚಕ್ರವರ್ತಿಯವರು ನಾನು ಕೇವಲ ಪಾತ್ರ ತುಂಬಿದ್ದೆ ಅಷ್ಟೇ ನಾನು ದಿವ್ಯಾ ಸುರೇಶ್‍ಗೆ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಕೂಡ ಅವಳಿಂದ ಕ್ಷಮೆ ನಿರೀಕ್ಷಿಸಿದ್ದೆ. ಯಾಕೆಂದರೆ ನನ್ನನ್ನು ಸೆಕ್ಯೂರಿಟಿ ಗಾರ್ಡ್ ಎಂದು ಕರೆದಿದ್ದಳು. ನಾನು ಅವಳಿಗೆ ತಿಳಿ ಹೇಳಿದ್ದೆ, ಅವಳಿಗೆ ಒಳ್ಳೆಯಾದಗಲಿ ಎಂದು ಬಯಸಿದ್ದೆ. ಅದೊಂದು ಬೇಜಾರಿತ್ತು. ಆದರೆ ಅದು ಬಿಟ್ಟರೆ ಅವಳು ಸ್ವೀಟ್ ಗರ್ಲ್. ಅವಳು ನನಗೆ ಬೇಜಾರು ಮಾಡಿದಕ್ಕೆ, ನಾನು ಅವಳಿಗೆ ಬೇಜಾರು ಮಾಡಲು ಹೊರಟಿದ್ದೆ. ಅದು ನನ್ನ ಚಿಕ್ಕತನ. ಆದರೆ ನಾನು ಅದನ್ನು ಕ್ಷಮಿಸಿ ಮುಂದೆ ಹೋಗಬೇಕಾಗಿತ್ತು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *